
ಕೃಷಿ ಹೊಂಡದಲ್ಲಿ ಈಜಲು ಹೋಗಿ 34ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ…
ಮೃತ ವ್ಯಕ್ತಿಯನ್ನು ಮಾಗಡಿ ರಸ್ತೆಯ ದಾಸರಹಳ್ಳಿ ನಿವಾಸಿ ಶಿವಕುಮಾರ್(34), ಗುರುತಿಸಲಾಗಿದೆ..
ನಿನ್ನೆ ಸೋಲಾರ್ ಅಳವಡಿಸಲು ಜನರೇಟರ್ ತರಸಿದ್ದೇವು. ಕೆಲಸ ಮುಗಿದ ನಂತರ ಇಂದು ಜನರೇಟರ್ ನ್ನು ವಾಪಸ್ ತೆಗೆದುಕೊಂಡು ಹೋಗಲು ಟಾಟಾ ಏಸ್ ವಾಹನವನ್ನು ಕರೆಸಿದ್ದೇವು. ಡ್ರೈವರ್ ಜೊತೆ ಡ್ರೈವರ್ ಅಕ್ಕನ ಮಗ ಹಾಗೂ ಅಕ್ಕನ ಮಗನ ಸ್ನೇಹಿತ ಸೇರಿ ಇಬ್ಬರು ಹುಡುಗರು ಬಂದಿದ್ದರು.
ನಾವು ನಮ್ಮ ಪಾಡಿಗೆ ಟಾಟಾ ಏಸ್ ಗೆ ಜನರೇಟರ್ ಇಡುವಷ್ಟರಲ್ಲಿ ಡ್ರೈವರ್ ಅಕ್ಕನ ಮಗನ ಸ್ನೇಹಿತ ಶಿವಕುಮಾರ್ ಕೃಷಿ ಹೊಂಡ ನೋಡಿಕೊಂಡು ಬರುತ್ತೇನೆ ಎಂದು ಹೇಳುತ್ತಾನೆ. ಆಗ ನಾವು ಬೇಡ ಎಂದು ಹೇಳಿ ನಮ್ಮ ಕೆಲಸ ಮುಂದುವರಿಸಿದೆವು. ನಮ್ಮನ್ನು ಯಾಮಾರಿಸಿ ಕೃಷಿ ಹೊಂಡ ಬಳಿ ಹೋಗಿ ಲಾಕ್ ತೆಗೆದು ಈಜಾಡಲು ಧುಮಕ್ಕುತ್ತಾನೆ. ಹೋಗಿ ನೋಡುವಷ್ಟರಲ್ಲಿ ಆತನ ಜೀವ ಹೋಗಿತ್ತು ಎಂದು ಕೃಷಿ ಹೊಂಡ ಮಾಲೀಕ ಶಿವಕುಮಾರ್ ತಿಳಿಸಿದ್ದಾರೆ..
ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…..