ಕೃಷಿ ಹೊಂಡಕ್ಕೆ ಬಿದ್ದು ಶಾಲಾ ಬಾಲಕ ಸಾವು

ತೂಬಗೆರೆ ಗ್ರಾಮದ ರಾಜು ಎಂಬುವವರ ಮಗನಾದ ನಾಗೇಶ್(14) ಎಂಬ ಬಾಲಕ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ‌.

ಘಟನೆ ತೂಬಗೆರೆ ಗ್ರಾಮದ ನಾರಸಿಂಹನಹಳ್ಳಿ ಬಳಿಯ ತೋಟವೊಂದರ ಕೃಷಿ ಹೊಂಡದಲ್ಲಿ ನಡೆದಿದೆ.

ಇಂದು ಶನಿವಾರ ಹಿನ್ನೆಲೆ ಮಧ್ಯಾಹ್ನಕ್ಕೆ ಶಾಲೆ ಮುಗಿಸಿಕೊಂಡು ಮನೆಯಲ್ಲಿ ಶಾಲಾ ಬ್ಯಾಗ್ ಇಟ್ಟು ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ಮೂರು ಜನ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದಾರೆ. ಮೂರು ಮಂದಿಯಲ್ಲಿ ಒಬ್ಬ ಬಾಲಕ ನೇರವಾಗಿ ನೀರಿಗೆ ಇಳಿದಿದ್ದಾನೆ. ಈಜು ಬಾರದ ಹಿನ್ನೆಲೆ‌ ನೀರಲ್ಲಿ ಮುಳುಗಿ ನಾಗೇಶ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

Leave a Reply

Your email address will not be published. Required fields are marked *