ರಾತ್ರೋರಾತ್ರಿ ಕಿಡಿಗೇಡಿಗಳು ಗುಲಾಬಿ ತೋಟಕ್ಕೆ ಬೆಂಕಿ ಇಟ್ಟಿರುವ ಪರಿಣಾಮ ಇಡೀ ತೋಟ ಸುಟ್ಟು ಭಸ್ಮವಾಗಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದೆ.
ಬೂದಿಗೆರೆ ಗ್ರಾಮದ ಚಂದ್ರ ಮೋಹನ್ ಒಂದು ಎಕರೆಯಲ್ಲಿ ಸಾಲಸೋಲ ಮಾಡಿ ಗುಲಾಬಿ ತೋಟ ಮಾಡಿದ್ದರು. ಇನ್ನೇನು ಫಸಲು ಕೈ ಬರುವ ಸಮಯದಲ್ಲಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಬೆಂಕಿಗೆ ತೋಟದಲ್ಲಿ ಗುಲಾಬಿ ಗಿಡಗಳು ಸಂಪೂರ್ಣವಾಗಿ ನಾಶ ಆಗಿವೆ. ಜೊತೆಗೆ ಗುಲಾಬಿ ತೋಟಕ್ಕೆ ಅಳವಡಿಸಿದ್ದ ಸುಮಾರು ಒಂದು ಲಕ್ಷ ಮೌಲ್ಯದ ಡ್ರಿಪ್ ಪೈಪ್ ಗಳು ಕೂಡ ನಾಶ ಆಗಿವೆ.
ಬೆಂಕಿ ಅವಘಡದಿಂದ ಅಂದಾಜು 2 ಲಕ್ಷ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.