ಕಾರು ಮತ್ತು ದ್ವಿಚಕ್ರ ವಾಹನ‌ದ‌ ನಡುವೆ ಅಪಘಾತ: ಓರ್ವ ವ್ಯಕ್ತಿ ‌ಸ್ಥಳದಲ್ಲೇ‌ ಸಾವು

ದೊಡ್ಡಬಳ್ಳಾಪುರ:ಕಾರು ಮತ್ತು ದ್ವಿಚಕ್ರ ವಾಹನ‌ದ‌ ನಡುವೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ‌ಸ್ಥಳದಲ್ಲೇ‌ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಹುಲುಕುಂಟೆ‌ ಟೋಲ್ ಬಳಿ‌ ನಡೆದಿದೆ.

ಹುಲುಕುಂಟೆ‌ ಕಾಲೋನಿ ನಿವಾಸಿ ಶಿವಣ್ಣ (65) ಮೃತ‌ ದುರ್ದೈವಿ.

ದಿನಸಿ ತೆಗೆದುಕೊಳ್ಳಲು ಹುಲುಕುಂಟೆ‌ ಗ್ರಾಮಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದೆ.

ಮೃತ ವ್ಯಕ್ತಿ ಪಿಡಿಒ ಆಗಿ ನಿವೃತ್ತಿ ಹೊಂದಿದ್ದರು. ಅಪಘಾತ ಖಂಡಿಸಿ ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಹಿನ್ನೆಲೆ ದೊಡ್ಡಬಳ್ಳಾಪುರ ಮತ್ತು ತುಮಕೂರಿಗೆ ಸಂಪರ್ಕ ‌ಕಲ್ಪಿಸುವ ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀ ವರೆಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿತ್ತು.

ದೊಡ್ಡಬೆಳವಂಗಲ ‌ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *