ಕಾರು ಅಪಘಾತದಲ್ಲಿ ಮೂವರು ಅಪ್ತ ಸ್ನೇಹಿತರು ಸ್ಥಳದಲ್ಲೇ ಸಾವು

ಕಾರು ಅಪಘಾತದಲ್ಲಿ ಮೂವರು ಅಪ್ತ ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ನೈಸ್ ರಸ್ತೆಯ ಟೋಲ್ ಬಳಿ ನಡೆದಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್, ಇದೇ ಗ್ರಾಮದ ಕುಮಾರ್, ನಂಜೇಶ್ ಮೂರು ಜನ ಗೋವಾಗೆ ತೆರಳಬೇಕೆಂದು ಬೆಂಗಳೂರಿನತ್ತ ಬರುವ ವೇಳೆ ಈ ದುರ್ಗಟನೆ ನಡೆದಿದೆ.

ಆಕಸ್ಮಿಕವಾಗಿ ಕಾರಿನ ಕಂಟ್ರೋಲ್​ ಮಿಸ್​ ಆಗಿ ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಕಾರು ಜಂಪ್​ ಆಗಿದೆ.. ಹೀಗೆ ಮಿಸ್​ ಆದ ಕಂಟ್ರೋಲ್​ನಿಂದ ಆಗಬಾರದ ದುರಂತ ಸಂಭವಿಸಿ ಬಿಟ್ಟಿದೆ. ಒಂದು ಕಡೆ ಎಕ್ಸ್ ಯು ವಿ 700 ಕಾರು ಕಂಪ್ಲೀಟ್​ ಡ್ಯಾಮೇಜ್​ ಆಗಿದ್ದರೆ, ಮತ್ತೊಂದು​ ಕಡೆ ಸ್ಕಾರ್ಪಿಯೋ ಪೀಸ್​ ಪೀಸ್​ ಆಗಿದೆ.

ಮಳೆಯಿಂದಾಗಿ ಕಾರಿನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿರೋ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲೇ ಇದ್ದ ವಾಹನ ಸವಾರರು ವಾಹನದಲ್ಲಿ ಸಿಲುಕಿದ್ದವರನ್ನ ರಕ್ಷಿಸಿದ್ದಾರೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!