ಕಾಂಗ್ರೆಸ್ ನಿಂದ ಮೂರನೇ ಪಟ್ಟಿ ರಿಲೀಸ್: ಕೋಲಾರಕ್ಕೆ ಕೊತ್ತೂರು ಮಂಜುನಾಥ್, ಡಾ.ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಕಣಕ್ಕೆ. ಕೈ ಹಿಡಿದ ಲಕ್ಷ್ಮಣ ಸವದಿಗೆ ಅಥಣಿ ಟಿಕೆಟ್

2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಅಳೆದುತೂಗಿ ಅಭ್ಯರ್ಥಿಗಳನ್ನು ಅಖೈರುಗೊಳಿಸುತ್ತಿರುವ ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು, 43 ಮಂದಿ ಟಿಕೆಟ್ ಗಿಟ್ಟಿಸಿಕೊಂಡರೆ ತೆರದಾಳದಿಂದ ಸಿದ್ದು ಬಣದ ಉಮಾಶ್ರೀಗೆ ಟಿಕೆಟ್ ಕೈ ತಪ್ಪಿದೆ. ಉಳಿದಂತೆ ಅರಸಿಕೆರೆಗೆ ಕೆಎಂ ಶಿವಲಿಂಗೇಗೌಡಗೆ ಟಿಕೆಟ್ ಖಾತ್ರಿಯಾಗಿದೆ.

ಮದ್ದೂರಲ್ಲಿ ಎಸ್.ಎಂ ಕೃಷ್ಣಾ ಸಂಬಂಧಿ ಗುರುಚರಣ್ ಕೈ ತಪ್ಪಿದ ಟಿಕೆಟ್ ಕಮಲೂರು ಉದಯ್ ಗೆ ಪಡಲಾಗಿದೆ.

ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗಂಗಾಧಾರ್ ಗೆ ಮಣೆ.

ಈಗಾಗಲೇ ಜೆಡಿಎಸ್ 2 ಪಟ್ಟಿ, ಬಿಜೆಪಿ 2 ಪಟ್ಟಿ, ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ತಳ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಅಳೆದು ತೂಗಿ ಹಂತ ಹಂತವಾಗಿ ಅಭ್ಯರ್ಥಿಗಳನ್ನು ಫೈನಲ್ ಮಾಡುತ್ತಿರುವ ವರಿಷ್ಠರು.

ಅಥಣಿ ಕ್ಷೇತ್ರದಿಂದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಟಿಕೆಟ್ ಪಡೆದಿದ್ದಾರೆ. ಕೋಲಾರ ಸೀಟು ಕೋತ್ತನೂರು ಜಿ.ಮಂಜುನಾಥ್‌ಗೆ ನೀಡಲಾಗಿದೆ.

Leave a Reply

Your email address will not be published. Required fields are marked *