ಸರ್ಕಾರ ಕೂಡಲೇ ನನ್ನ ಮಗನನ್ನ ಬಂಧನದಿಂದ ಬಿಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆಯ ಮುಂದೆ ಉಪವಾಸ ಸತ್ಯಾಗ್ರ ಮಾಡುತ್ತಾ ಪ್ರಾಣ ಬಿಡುತ್ತೇನೆ ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ತಾಯಿ ಗೌರಮ್ಮ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನನ್ನ ಮಗ ಕನ್ನಡ ಭಾಷೆಗೆ ಕನ್ನಡ ನಾಡಿಗೆ ಹೋರಾಟ ಮಾಡುವುದೇ ತಪ್ಪಾ, ಅವನನ್ನ ಕರೆದುಕೊಂಡು ಹೋಗಿ ಬಂಧನದಲ್ಲಿ ಇಟ್ಟಿದ್ದೀರಾ, ನಾಚಿಕೆ, ಮಾನ- ಮರ್ಯಾದೆ ಇಲ್ಲದ ಸರ್ಕಾರ ಎಂದು ಕಿಡಿಕಾರಿದ್ದಾರೆ.
ನಾಳೆ ವರಿಗೂ ಕಾಯುತ್ತೇನೆ ನಂತರ ನೋಡಿ ಏನೇ ಆದರೂ ಅದಕ್ಕೆ ಸರ್ಕಾರವೇ ಹೊಣೆ…., ನನ್ನ ಮಗ ಮನೆಗೆ ಬರುವರೆಗೂ ಊಟ, ನೀರು ಏನು ಮುಟ್ಟೋದಿಲ್ಲ ಎಂದು ಶಪಥ ಮಾಡಿದ್ದಾರೆ.