Categories: ಸಿನಿಮಾ

ಕನ್ನಡದ ಹುಡುಗ ಹಿಂದಿಯಲ್ಲಿ ಮಾಸ್‌ ಡೈರಕ್ಟರ್‌ ಆಗಿ ಮಿಂಚಿಂಗ್..!

ಸಿನಿಮಾ ರಂಗವೇ ಹಾಗೆ ಎತ್ತಕಡೆ ಯಾರನ್ನ ಕೈಬಿಸಿ ಕರೆಯುತ್ತೊ ಗೊತ್ತೇ ಆಗಲ್ಲ. ಸಿನಿಮಾ ಒಂದು ಕಲರ್‌ ಫುಲ್‌ ದುನಿಯಾ ರಾತ್ರೋ ರಾತ್ರಿ ಸ್ಟಾರ್‌ ಆಗಿ ಮಿಂಚಿದವರು ಎಷ್ಟೋ ಮಂದಿ ಅವಕಾಶಕ್ಕಾಗಿ ಅಲೆದು-ಅಲೆದು ಚಪ್ಪಲಿ ಸವಿಸಿದವರು ಎಷ್ಟೋ ಮಂದಿ. ಇಷ್ಟೆಲ್ಲಾ ಪೀಠಿಕೆ ಹಾಕೊದಕ್ಕೆ ಕಾರಣ ಇದೆ, ಕನ್ನಡ ಹುಡುಗ ಹಿಂದಿ ಸಿನಿಮಾ ಮಾಡಿ ಕನ್ನಡ ಕಂಪನ್ನ ಬೇರೆ ರಾಜ್ಯಗಳಲ್ಲೂ ಬೀರುಲು ಮುಂದಾಗಿದ್ದಾರೆ. ʼಇಖ್ರಾ’ ಅನ್ನೋ ಹಿಂದಿ ಸಿನಿಮಾವನ್ನ ಅನೀಲ್ ಕೋನಾ ದೇವಸೋತ್ ನಿರ್ದೇಶನ ಮಾಡಿದ್ದಾರೆ.

ಚಿತ್ರಿಕರಣ ಮುಗಿಸಿ, ಕೆಲ ಸಾಂಗ್‌ ಶೂಟಿಂಗ್‌ ಅಷ್ಟೇ ಬಾಕಿ ಉಳಿದೆ. ನಿರ್ದೆಶನ, ಕಥೆ, ಚಿತ್ರಿಕಥೆ, ಸಂಭಾಷಣೆ, ಡೈಲಾಗ್‌ ರೈಟಿಂಗ್‌, ಅನೀಲ್ ಕೊನಾ ದೇವಸೋತ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗವೇ ಇದೆ. ವಿನೋದ್‌ ರೈನಾ, ಪ್ರೀಯಾ ಶುಕ್ಲಾ, ಪೂಜಾ ಪ್ರಾಜಾಪತ್‌, ಶರತ್‌ ಅಲಿ, ದೀಲಿಪ್‌ ರಾತೋಡ್‌, ಆಶೀಸ್‌ ಪತಾಕ್‌, ಅಜಿತ್‌ ಸಾಜಿ, ಗಿಬಿನ್‌ ಜಿರೋಜಿ ಸೇರಿದಂತೆ ದೊಡ್ಡ ತಾರ ಬಳಗವೆ ಇದೆ. ಈ ಸಿನಿಮಾಗೆ ಅನೀಲ್ ಕೋನಾ ದೇವಸೋತ್ ಬಂಡವಾಳ ಹೂಡಿದ್ದು, ರಿತೇಶ್‌ ಕುಮಾರ್‌, ರಮೇಶ್‌ ಮಾಲಿ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಗೆ ಕವಲೇಶ್‌ ಮಾಲಿ ಅದ್ಭುತ ಛಾಯಾಗ್ರಹಣ ಮಾಡಿದ್ದಾರೆ.

ಸಿನಿಮಾ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು, ಕೆಲ ಸಾಂಗ್‌ ಶೂಟಿಂಗ್ ಬಾಕಿ ಇದೆ. ಜೂನ್‌ ೨೨ರಿಂದ ಶೂಟಿಂಗ್‌ ಆರಂಭಿಸಿದ ಚಿತ್ರತಂಡ ರಾಜಸ್ಥಾನ್‌, ಹೈದ್ರಾಬಾದ, ಕೇರಳದಲ್ಲಿ ಚಿತ್ರಿಕರಣ ಮಾಡಿದೆ. ಈ ಚಿತ್ರ ಮಹಿಳೆಯ ಬದುಕಿನ ಹೋರಾಟವನ್ನ ಕೇಂದ್ರಿಕರಿಸಿ ಚಿತ್ರಕಥೆಯನ್ನ ಹೆಣೆಯಾಲಾಗಿದೆ. ಇನ್ನೇನು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಮುಂದಾಗಿದೆ.

Ramesh Babu

Journalist

Share
Published by
Ramesh Babu

Recent Posts

ಕಸ್ತೂರಿ ರಂಗನ್ ವರದಿ; ‘ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ’- ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು…

4 hours ago

ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ರೈತ ಸಂಘ ಆಗ್ರಹ

ಕೋಲಾರ : ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಖಾಸಗಿ…

5 hours ago

ಶಿಷ್ಟಾಚಾರ ವಿವಾದಕ್ಕೆ ಮತ್ತಷ್ಟು ಕಾವು: ಶಾಸಕರಿಗೆ ಕಾನೂನು, ಶಿಷ್ಟಾಚಾರದ ಅರಿವಿಲ್ಲ- ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕ ವೆಂಕಟರಮಣಯ್ಯ ವಾಗ್ದಾಳಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ (ಡಿಪಿಎ) ಅಧ್ಯಕ್ಷ…

6 hours ago

ಕುಡಿಯುವ ನೀರು, ಮೇವಿಗೆ ಮುಂಜಾಗ್ರತೆ ವಹಿಸಿ: ನಿಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ- ಸಚಿವ ಕೆ.ಎಚ್ ಮುನಿಯಪ್ಪ

ಎಲ್ಲಾ ವರ್ಗದ ಬಡವರಿಗೆ ಸೂರು, ಸೈಟ್ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ,…

8 hours ago

ಶಿಷ್ಟಾಚಾರದ ಹೆಸರಲ್ಲಿ ವಾಗ್ಯುದ್ಧ: ಹಾಲಿ ಶಾಸಕ ಧೀರಜ್ ಮುನಿರಾಜು–ಮಾಜಿ ಶಾಸಕ ವೆಂಕಟರಮಣಯ್ಯ ನಡುವೆ ಬಹಿರಂಗ ಕಿತ್ತಾಟ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ…

15 hours ago

ನಿಷೇಧದ ನಡುವೆಯೂ ಡಿಜೆ ಬಳಕೆ: ವಾಹನ ವಶ, ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಡಿಜೆ ಬಳಕೆಗೆ ನಿಷೇಧವಿದ್ದರೂ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಸಿದ ಆರೋಪದ ಮೇರೆಗೆ ಡಿಜೆ ವಾಹನವನ್ನು ಜಪ್ತಿ ಮಾಡಿರುವ…

1 day ago