Categories: ಸಿನಿಮಾ

ಕನ್ನಡದ ಹುಡುಗ ಹಿಂದಿಯಲ್ಲಿ ಮಾಸ್‌ ಡೈರಕ್ಟರ್‌ ಆಗಿ ಮಿಂಚಿಂಗ್..!

ಸಿನಿಮಾ ರಂಗವೇ ಹಾಗೆ ಎತ್ತಕಡೆ ಯಾರನ್ನ ಕೈಬಿಸಿ ಕರೆಯುತ್ತೊ ಗೊತ್ತೇ ಆಗಲ್ಲ. ಸಿನಿಮಾ ಒಂದು ಕಲರ್‌ ಫುಲ್‌ ದುನಿಯಾ ರಾತ್ರೋ ರಾತ್ರಿ ಸ್ಟಾರ್‌ ಆಗಿ ಮಿಂಚಿದವರು ಎಷ್ಟೋ ಮಂದಿ ಅವಕಾಶಕ್ಕಾಗಿ ಅಲೆದು-ಅಲೆದು ಚಪ್ಪಲಿ ಸವಿಸಿದವರು ಎಷ್ಟೋ ಮಂದಿ. ಇಷ್ಟೆಲ್ಲಾ ಪೀಠಿಕೆ ಹಾಕೊದಕ್ಕೆ ಕಾರಣ ಇದೆ, ಕನ್ನಡ ಹುಡುಗ ಹಿಂದಿ ಸಿನಿಮಾ ಮಾಡಿ ಕನ್ನಡ ಕಂಪನ್ನ ಬೇರೆ ರಾಜ್ಯಗಳಲ್ಲೂ ಬೀರುಲು ಮುಂದಾಗಿದ್ದಾರೆ. ʼಇಖ್ರಾ’ ಅನ್ನೋ ಹಿಂದಿ ಸಿನಿಮಾವನ್ನ ಅನೀಲ್ ಕೋನಾ ದೇವಸೋತ್ ನಿರ್ದೇಶನ ಮಾಡಿದ್ದಾರೆ.

ಚಿತ್ರಿಕರಣ ಮುಗಿಸಿ, ಕೆಲ ಸಾಂಗ್‌ ಶೂಟಿಂಗ್‌ ಅಷ್ಟೇ ಬಾಕಿ ಉಳಿದೆ. ನಿರ್ದೆಶನ, ಕಥೆ, ಚಿತ್ರಿಕಥೆ, ಸಂಭಾಷಣೆ, ಡೈಲಾಗ್‌ ರೈಟಿಂಗ್‌, ಅನೀಲ್ ಕೊನಾ ದೇವಸೋತ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗವೇ ಇದೆ. ವಿನೋದ್‌ ರೈನಾ, ಪ್ರೀಯಾ ಶುಕ್ಲಾ, ಪೂಜಾ ಪ್ರಾಜಾಪತ್‌, ಶರತ್‌ ಅಲಿ, ದೀಲಿಪ್‌ ರಾತೋಡ್‌, ಆಶೀಸ್‌ ಪತಾಕ್‌, ಅಜಿತ್‌ ಸಾಜಿ, ಗಿಬಿನ್‌ ಜಿರೋಜಿ ಸೇರಿದಂತೆ ದೊಡ್ಡ ತಾರ ಬಳಗವೆ ಇದೆ. ಈ ಸಿನಿಮಾಗೆ ಅನೀಲ್ ಕೋನಾ ದೇವಸೋತ್ ಬಂಡವಾಳ ಹೂಡಿದ್ದು, ರಿತೇಶ್‌ ಕುಮಾರ್‌, ರಮೇಶ್‌ ಮಾಲಿ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಗೆ ಕವಲೇಶ್‌ ಮಾಲಿ ಅದ್ಭುತ ಛಾಯಾಗ್ರಹಣ ಮಾಡಿದ್ದಾರೆ.

ಸಿನಿಮಾ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು, ಕೆಲ ಸಾಂಗ್‌ ಶೂಟಿಂಗ್ ಬಾಕಿ ಇದೆ. ಜೂನ್‌ ೨೨ರಿಂದ ಶೂಟಿಂಗ್‌ ಆರಂಭಿಸಿದ ಚಿತ್ರತಂಡ ರಾಜಸ್ಥಾನ್‌, ಹೈದ್ರಾಬಾದ, ಕೇರಳದಲ್ಲಿ ಚಿತ್ರಿಕರಣ ಮಾಡಿದೆ. ಈ ಚಿತ್ರ ಮಹಿಳೆಯ ಬದುಕಿನ ಹೋರಾಟವನ್ನ ಕೇಂದ್ರಿಕರಿಸಿ ಚಿತ್ರಕಥೆಯನ್ನ ಹೆಣೆಯಾಲಾಗಿದೆ. ಇನ್ನೇನು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಮುಂದಾಗಿದೆ.

Ramesh Babu

Journalist

Share
Published by
Ramesh Babu

Recent Posts

ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…

2 hours ago

ಆನ್‌ಲೈನ್ ಗೇಮ್ ನಿಷೇಧ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿ: ಕಾಯ್ದೆ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆ ನಿಗದಿ

ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸದಾಗಿ…

3 hours ago

ಹೊಸಕೋಟೆ ಹೊರವಲಯದ ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಖಾಕಿ ಪಾಠ

ಸಿಲಿಕಾನ್ ಸಿಟಿ ಹೊರವಲಯದಲ್ಲಿ ಯುವಕರಿಂದ ಡೆಡ್ಲಿ ವ್ಹೀಲಿಂಗ್ ನಡೆದಿದೆ.. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಹೊಸಕೋಟೆ ಸಂಚಾರಿ ಪೊಲೀಸರು ಬಿಸಿ…

4 hours ago

ಬಿರುಗಾಳಿ ಸಹಿತ ಮಳೆ: ನೆಲ ಕಚ್ಚಿದ ಫಸಲಿಗೆ ಬಂದಿದ್ದ  ಬಾಳೆ ಬೆಳೆ: ಲಕ್ಷಾಂತರ ರೂ. ನಷ್ಟ: ಸಂಕಷ್ಟದಲ್ಲಿ ರೈತ

ರಾತ್ರಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ…

7 hours ago

ಮಳೆ, ಗಾಳಿ ಅವಾಂತರ: ವಿದ್ಯುತ್ ತಂತಿ ಮೇಲೆ ಬಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಭಾರೀ ಗಾತ್ರದ ಝಿಂಕ್ ಅಲ್ಯೂಮಿನಿಯಮ್ ಶೀಟ್‌: ರಸ್ತೆಗೆ ಅಡ್ಡಲಾಗಿ ಬಿದ್ದ 7 ವಿದ್ಯುತ್ ಕಂಬಗಳು

ನಿನ್ನೆ ರಾತ್ರಿ ಭಾರೀ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಝಿಂಕ್ ಅಲ್ಯೂಮಿನಿಯಮ್ ಶೀಟ್‌ಗಳು ಹಾರಿ ವಿದ್ಯುತ್ ತಂತಿಗಳ ಮೇಲೆ…

7 hours ago

ಬಿರುಗಾಳಿ ಸಹಿತ ಜೋರು ಮಳೆ: ಧರೆಗುರುಳಿದ 2 ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ), 9 ವಿದ್ಯುತ್ ಕಂಬಗಳು: ತಪ್ಪಿದ ಭಾರೀ ಅನಾಹುತ

ಇಂದು ಸಂಜೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಭಾರೀ ಮಳೆ ಅವಾಂತರದಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ... ದೊಡ್ಡಬಳ್ಳಾಪುರ ತಾಲೂಕಿನ…

18 hours ago