
ತೆಲಂಗಾಣದ ರಂಗಾರೆಡ್ಡಿಯ ಮಹೇಶ್ವರಂನಲ್ಲಿ ಬೀಗ ಹಾಕಿದ ಮನೆ ಕಳ್ಳತನ ಮಾಡಲು ಬಂದ ಕಳ್ಳನಿಗೆ ಏನೂ ಸಿಗಲಿಲ್ಲ. ಮನೆಯಲ್ಲಿ ಏನೂ ಸಿಗದಿದ್ದಕ್ಕೆ ಬೇಸರದಿಂದ ‘ಒಂದು ರೂಪಾಯಿ ಕೂಡ ಹಾಕಿಲ್ಲ, ನಮಸ್ತೆ ನಿಮಗೆ’ ಎಂದು ಸಿಸಿಟಿವಿ ಮುಂದೆ ಬಂದು ತನ್ನ ಹತಾಶೆ ವ್ಯಕ್ತಪಡಿಸಿದ್ದಾನೆ.

ಕೊನೆಗೆ ಬರಿಕೈಯಲ್ಲಿ ಮನೆಯಿಂದ ಹೊರ ಹೋಗುತ್ತಿರುವಾಗ ಕಳ್ಳ ನೀರಿನ ಬಾಟಲಿ ತೆಗೆದುಕೊಂಡು ಹೋಗಿ ಸಿಸಿಟಿವಿಯಲ್ಲಿ 20 ರೂಪಾಯಿ ಕೊಡುತ್ತಿರುವುದನ್ನು ತೋರಿಸಿ 20 ರೂಪಾಯಿ ನೋಟನ್ನು ಟೇಬಲ್ ಮೇಲೆ ಇಟ್ಟು ಹೋಗಿದ್ದಾನೆ.