ಕುಣಿಯೋದಕ್ಕೆ ಕೈಲಾಗದವನು ನೆಲ ಡೊಂಕು ಎಂದು ಹೇಳಿ ನುಣಿಚಿಕೊಳ್ಳುವುದುಂಟು, ಆದರೆ ಸಾಧನೆ ಮಾಡುವ ಛಲ ಇದ್ದವನು ಯಾವ ಕುಂಟು ನೆಪ ಹೇಳದೇ ಸಾಧನೆ ಮಾಡಿ ತೋರಿಸುತ್ತಾನೆ.
ಮನುಷ್ಯನಿಗೆ ಪಂಚೇಂದ್ರಿಯಗಳು ಅತಿ ಮುಖ್ಯ, ದೇಹದಲ್ಲಿ ಯಾವುದಾದರೂ ಒಂದು ಪಂಚೇಂದ್ರಿಯವನ್ನ ಶಾಶ್ವತವಾಗಿ ಕಳೆದುಕೊಂಡರೂ ಜೀವನದಲ್ಲಿ ತುಂಬಾ ಸಮಸ್ಯೆ ಅನುಭವಿಸಬೇಕಾಗುತ್ತದೆ. ಪಂಚೇಂದ್ರಿಯ ಲೋಪಕ್ಕೆ ಒಳಗಾಗಿರುವವರು ಜೀವನದಲ್ಲಿ ಕುಗ್ಗಿ ಹೋಗಿರುತ್ತಾರೆ. ಅದರಲ್ಲಿ ಕೆಲವರು ಕುಗ್ಗದೇ, ಜಗ್ಗದೇ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಹಲವು ಮಹತ್ತರವಾದ ಸಾಧನೆಗಳನ್ನು ಮಾಡಿ ಇತರರಿಗೂ ಸ್ಫೂರ್ತಿಯಾಗಿ ನಿಂತಿರುವ ಹಲವಾರು ಉದಾಹರಣೆ ನಮ್ಮ ಕಣ್ಣು ಮುಂದಿವೆ.
ಭೂಮಿಕಾ ಅವರಿಗೆ ಕಣ್ಣು ಕಾಣದಿದ್ದರೂ ರುಚಿ ರುಚಿಯಾದ, ಘಮಘಮಿಸುವ ಅಡುಗೆ ಮಾಡುತ್ತಾರೆ. ಅಡುಗೆ ಮಾಡುವುದನ್ನು ತನ್ನ ಪತಿಯ ಬಳಿ ವಿಡಿಯೋ ಮಾಡಿಸಿ ನಂತರ ಯೂಟ್ಯೂಬ್ ಗೆ ಅಪ್ಲೋಡ್ ಮಾಡುತ್ತಾರೆ. ಇದೂವರೆಗೆ ಸುಮಾರು ಸಾವಿರ ಅಡುಗೆ ಮಾಡಿರುವ ವಿಡಿಯೋಗಳನ್ನು ಭೂಮಿಕಾ ಅವರು ತಮ್ಮ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಭೂಮಿಕಾ ಅವರು ಹುಟ್ಟಿನಿಂದಲೇ ಅಂಧತ್ವ ಹೊಂದಿದವರಲ್ಲ. ಮದುವೆಯಾಗಿ 10 ವರ್ಷಗಳ ನಂತರ ತಮ್ಮ ದೃಷ್ಟಿ ಕಳೆದುಕೊಂಡವರು. 5ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುವ ಅಪರೂಪದ ಕಣ್ಣಿನ ಕಾಯಿಲೆ ‘ಆಪ್ಟಿಕಲ್ ನೂರೈಟಿಸ್’ ಇವರ ಅಂಧತ್ವಕ್ಕೆ ಕಾರಣವಾಗಿದೆ.
2010ರಲ್ಲಿ ಸಣ್ಣದಾಗಿ ತಲೆನೋವು ಬಂದಿರುತ್ತದೆ. ತಲೆನೋವಿಗೆ ಚಿಕಿತ್ಸೆ ಪಡೆಯಲು ಹೋದಾಗ ಕಣ್ಣಿನ ಸಮಸ್ಯೆ ಇರುವ ಬಗ್ಗೆ ವೈದ್ಯರು ಕುಟುಂಬದವರಿಗೆ ತಿಳಿಸುತ್ತಾರೆ. ನಂತರ ನಾನಾ ಕಡೆ, ವಿವಿಧ ಕಣ್ಣಿನ ಪರೀಕ್ಷೆ, ಆರ್ಯುವೇದ ಪರೀಕ್ಷೆಗಳನ್ನು ತಜ್ಞ ವೈದ್ಯರಿಂದ ಮಾಡಿಸಿಕೊಂಡರು ಸರಿಹೋಗದ ಕಾಯಿಲೆ.
ಹಂತಹಂತವಾಗಿ 2018ರಲ್ಲಿ ಸಂಪೂರ್ಣವಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಶಾಶ್ವತ ಕತ್ತಲ ಲೋಕಕ್ಕೆ ಬರುತ್ತಾರೆ. ಕಣ್ಣು ಕಳೆದುಕೊಂಡ ಭೂಮಿಕಾ ಅವರು ಮಾನಸಿಕವಾಗಿ ವ್ಯಥೆಗೊಳಗಾಗಿ ಜೀವನ ಸಾಕೆನಿಸುವ ಮಟ್ಟಕ್ಕೆ ಚಿಂತನೆ ಮಾಡುತ್ತಾರೆ. ಆಗ ಭೂಮಿಕಾ ಕುಟುಂಬ ಕುಗ್ಗಿ ಹೋಗಿದ್ದ ಜೀವಕ್ಕೆ ಆತ್ಮಸ್ಥೈರ್ಯ ತುಂಬಿ ಖಿನ್ನತೆಯಿಂದ ಹೊರತಂದು ಖುಷಿಯಾಗಿಡುತ್ತಾರೆ.
ಅಡುಗೆ ಕೋಣೆಯಲ್ಲಿ ಯಾವ ಪದಾರ್ಥ, ಯಾವ ವಸ್ತು ಎಲ್ಲಿರುತ್ತೆ ಎಂಬುದು ಚೆನ್ನಾಗಿ ಗೊತ್ತು, ಚಕಚಕ ಅಂತಾ ತರಕಾರಿ ಕಟ್ ಮಾಡುತ್ತಾರೆ, ಲವಲವಿಕೆಯಿಂದ ಅಡುಗೆ ಮನೆಯಲ್ಲಿ ಓಡಾಡುತ್ತಾರೆ. ತರಕಾರಿ, ಹಣ್ಣುಗಳನ್ನು ಕೈಗಳಿಂದ ಸ್ಪರ್ಶಿಸಿ ಹಾಗೂ ವಾಸನೆ ನೋಡಿ ಕೊಳೆತು ಹೋಗಿದಿಯೋ, ಅಥವಾ ಚೆನ್ನಾಗಿದಿಯೋ ಎಂಬುದು ತಿಳಿದುಕೊಳ್ಳುತ್ತಾರೆ. ಚೆನ್ನಾಗಿದ್ದರೆ ಮಾತ್ರ ಅಡುಗೆಗೆ ಬಳಸುತ್ತಾರೆ.
ಬ್ಯಾಚುಲರ್ಸ್ ಯುವಕ ಯುವತಿಯರು ಸುಲಭವಾಗಿ ಸ್ವತಃ ತಾವೇ ಅಡುಗೆ ಮಾಡಿಕೊಳ್ಳುಲು ಅನುಕೂಲವಾಗುಂತೆ ಅಡುಗೆ ಮಾಡುವ ಮೂಲಕ ಸಲಹೆ ನೀಡುತ್ತಾರೆ.
ಭೂಮಿಕಾ ಅವರು ಮಾಡಿದಂತಹ ಅಡುಗೆ, ವಿಧ ವಿಧ ಅಡುಗೆಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ‘ಭೂಮಿಕಾ ಕಿಚನ್’ ಯೂಟ್ಯೂಬ್ ಚಾನೆಲ್ ನ್ನು ವೀಕ್ಷಿಸಿ, ಸಬ್ ಸ್ಕ್ರೈಬ್ ಆಗಿ ಭೂಮಿಕಾ ಅವರನ್ನು ಪ್ರೋತ್ಸಾಹಿಸಬೇಕಾಗಿದೆ.
ಒಟ್ಟಾರೆ ಇವರ ಸಾಧನೆಗೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕಾಗಿದೆ. ಕೆಲವರು ಅಡುಗೆ ಮನೆಗೆ ಹೋಗೋದೆ ಕಷ್ಟ. ಅಂತಹವರು ಭೂಮಿಕಾ ಕಿಚನ್ ನೋಡಿದರೆ ಖಂಡಿತ ಅಡುಗೆ ಮಾಡಲು ಮುಂದಾಗುತ್ತಾರೆ ಆದ್ದರಿಂದ ಭೂಮಿಕಾ ಅವರು ಎಲ್ಲರಿಗೂ ಸ್ಫೂರ್ತಿದಾಯಕ ಮಹಿಳೆಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…