ಒಬ್ಬೊಂಟಿಯಾಗಿ ಆಟೋ ಹತ್ತುವ ಮಹಿಳೆಯರೇ ಹುಷಾರ್….!

ಕಮನೆಗೆ ತೆರಳಲು ಆಟೋ ಹತ್ತಿದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಹಿಳೆಯ ಕೊರಳಲ್ಲಿದ್ದ ಚಿನ್ನದ ತಾಳಿ ಸಮೇತ ಇದ್ದ ಸುಮಾರು 33 ಗ್ರಾಂ ತೂಕದ ಮಾಂಗಲ್ಯ ಸರ, 4 ಗ್ರಾಂ ತೂಕದ ಚಿನ್ನದ ಕಿವಿ ಓಲೆಯನ್ನು ದೋಚಿದ್ದ ಖತರ್ನಾಕ್ ಜೋಡಿಯನ್ನು ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ ಪೆಕ್ಟರ್ ಅಮರೇಶ್‌ ಗೌಡ ನೇತೃತ್ವದ ಪೊಲೀಸರು ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತೂಬಗೆರೆ ಪೇಟೆಯ ಯಶೋಧಮ್ಮ ಎನ್ನುವವರು ಜ.11ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ಮಗಳ ಮನೆಗೆ ತೆರಳಿದ್ದು, ಮರಳಿ ಮನೆಗೆ ಬರಲು ಕೊಂಗಾಡಿಯಪ್ಪ ಬಳಿ ಬಂದ ಆಟೋವನ್ನು ಹತ್ತಿದ್ದಾರೆ.

ಈ ಆಟದಲ್ಲಿ ಚಾಲಕನೊಂದಿಗೆ ಓಂಶಕ್ತಿ ಮಾಲಾಧಾರಿ ಮಹಿಳೆಯಿದ್ದು, ಆಕೆಯನ್ನು ಆಲಹಳ್ಳಿ ಬಿಟ್ಟು ನಂತರ ಯಶೋಧಮ್ಮ ಅವರನ್ನು ಮನೆಗೆ ಬಿಡುವುದಾಗಿ ಚಾಲಕ ಕರೆದೊಯ್ದಿದ್ದಾನೆ.

ಬಳಿಕ ನಾಗಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಈ ಜೋಡಿ, ಯಶೋಧಮ್ಮರ 33ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 4 ಗ್ರಾಂ ತೂಕದ ಓಲೆಯನ್ನು ದೋಚಿದ್ದು, ನಂತರ ಆಲಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ತನಿಖೆ ನಡೆಸಿ, ಯಶೋಧಮ್ಮ ಅವರನ್ನು ದೋಚಿದ್ದ ಖತರ್ನಾಕ್ ಜೋಡಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

ಬಂಧಿತರನ್ನು ರಾಜಾನುಕುಂಟೆ ಸಮೀಪದ ಹನಿಯೂರ ನಿವಾಸಿ ಆಟೋ ಚಾಲಕ ರಘು ಮತ್ತು ಚೆಲ್ಲಹಳ್ಳಿ ಗ್ರಾಮದ ಶ್ವೇತಾ ಎಂದು ಗುರುತಿಸಲಾಗಿದೆ.

ಇವರಿಬ್ಬರು ಪ್ರೇಮಿಗಳಾಗಿದ್ದು, ಓಂಶಕ್ತಿ ಮಾಲೆ ಧರಿಸಿದ್ದ ಶ್ವೇತಾಳಿಗೆ ಪೂಜಾ ಸಾಮಗ್ರಿ ಕೊಡಿಸಲು ದೊಡ್ಡಬಳ್ಳಾಪುರಕ್ಕೆ ಬಂದು, ಮರಳಿ ತೆರಳುವ ವೇಳೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಬಂಧಿತರು ಮಾಂಗಲ್ಯ ಸರವನ್ನು ಹೆಸರಘಟ್ಟದ ಮಣಿಪುರಂನಲ್ಲಿ ಅಡವಿಟ್ಟಿದ್ದು, ಮರು ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ವಿವರ:

ದಿನಾಂಕ 11/01/2025 ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ನಾನು ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ನಮ್ಮ ಮಗಳ ಮನೆಗೆ ಹೋಗಿದ್ದು, ನಂತರ ತೂಬಗೆರೆಪೇಟೆಯಲ್ಲಿನ ನಮ್ಮ ಮನೆಗೆ ವಾಪಸ್ ಬರುವ ಸಲುವಾಗಿ ನೆಲಮಂಗಲ ರಸ್ತೆ, ಕೊಂಗಾಡಿಯಪ್ಪ ಹೈಸ್ಕೂಲ್ ಮುಂಭಾಗದಲ್ಲಿ ನಿಂತಿದ್ದಾಗ, ಇಸ್ಲಾಂಪುರ ಕಡೆಯಿಂದ ಕೆ.ಸಿ.ಪಿ ಸರ್ಕಲ್ ಕಡೆಗೆ ಹೋಗಲು ಒಂದು ಆಟೋ ರಿಕ್ಷಾ ಬಂದಿರುತ್ತದೆ, ನಾನು ಈ ಆಟೋ ರಿಕ್ಷಾದಲ್ಲಿ ಹತ್ತಿಕೊಂಡಿದ್ದು, ಈಗಾಗಲೇ ಆಟೋ ರಿಕ್ಷಾದಲ್ಲಿ ಬೇರೆ ಒಬ್ಬ ಮಹಿಳೆ ಇದ್ದು, ಓಂ ಶಕ್ತಿ ಮಾಲೆ ಹಾಕಿರುವಂತೆ ಕಂಡು ಬಂದರು. ನಾನು ಆಟೋ ರಿಕ್ಷಾದಲ್ಲಿ ಹತ್ತಿಕೊಂಡ ನಂತರ ಆ ಮಹಿಳೆ ಆಟೋ ರಿಕ್ಷಾ ಚಾಲಕನಿಗೆ ಭಜನೆಗೆ ಲೇಟ್ ಆಗುತ್ತದೆ ನಮ್ಮ ಮನೆಯವರು ಲೋಕೇಷನ್ ಕಳಿಸಿದಾರೆ ಬೇಗ ಹೋಗಿ ಎಂದು ಹೇಳಿ ಆಟೋ ರಿಕ್ಷಾ ಚಾಲಕನಿಗೆ ಆಟೋವನ್ನು ಬೇಗನೆ ಚಾಲನೆ ಮಾಡಿಕೊಂಡು ಹೋಗುವಂತೆ ಹೇಳಿದ್ದು, ಆಟೋ ರಿಕ್ಷಾ ಚಾಲಕ ಆಟೋವನ್ನು ಚಾಲನೆ ಮಾಡಿಕೊಂಡು ಕೆ.ಸಿ.ಪಿ.ಸರ್ಕಲ್ ಹತ್ತಿರ ಹೋಗಿದ್ದು, ಆಟೋ ರಿಕ್ಷಾವನ್ನು ತೇರಿನ ಬೀದಿ ಕಡೆಗೆ ತಿರುಗಿಸದೆ, ನನ್ನನ್ನು ಆಲಹಳ್ಳಿ, ಕಡೆಗೆ ಕರೆದುಕೊಂಡು ಹೋಗಿ, ಲೊಕೇಶನ್ ಸಿಗುತ್ತಿಲ್ಲ ಎಂದು ಹೇಳಿ ಅಲ್ಲಿಂದ ಅರಳುಮಲ್ಲಿಗೆ, ನಾಗಸಂದ್ರ ಕಡೆಗಳಲ್ಲಿ ಸುತ್ತಾಡಿಸಿ ನಂತರ ಚಿಕ್ಕತುಮಕೂರು ಕಡೆಗೆ ಕರೆದುಕೊಂಡು ಹೋಗಿ, ಚಿಕ್ಕತುಮಕೂರು ಗ್ರಾಮದ ಬಳಿ ಆಟೋ ರಿಕ್ಷಾ ಚಾಲಕ ಮತ್ತು ಆಟೋ ದಲ್ಲಿ ಇದ್ದ ಮಹಿಳೆ ಇಬ್ಬರೂ ಸೇರಿ ನನ್ನನ್ನು ಹೆದರಿಸಿ, ಮಹಿಳೆಯು ನನ್ನ ಕೊರಳಲ್ಲಿ ಇದ್ದ ಚಿನ್ನದ ತಾಳಿ ಸಮೇತ ಇದ್ದ ಸುಮಾರು 33 ಗ್ರಾಂ ತೂಕದ ಮಾಂಗಲ್ಯ ಸರ, 4 ಗ್ರಾಂ ತೂಕದ ಚಿನ್ನದ ಕಿವಿ ಓಲೆಯನ್ನು ನನ್ನಿಂದ ಬಲವಂತವಾಗಿ ಬಿಚ್ಚಿಕೊಂಡು, ನನ್ನನ್ನು ಕೂಗದಂತೆ ಹೆದರಿಸಿದರು.

ಅಲ್ಲಿಂದ ಮತ್ತೆ ನನ್ನನ್ನು ಆಟೋ ರಿಕ್ಷಾದಲ್ಲಿ ಅರಳುಮಲ್ಲಿಗೆ ಹತ್ತಿರ ಕರೆದುಕೊಂಡು ಬಂದು ಸಂಜೆ ಸುಮಾರು 7-30 ಗಂಟೆಯಲ್ಲಿ ನನ್ನನ್ನು ಅರಳುಮಲ್ಲಿಗೆ ಬಸ್ ಸ್ಟ್ಯಾಂಡ್ ಸಮೀಪದಲ್ಲಿ ಆಟೋ ರಿಕ್ಷಾದಿಂದ ಕೆಳಗೆ ಇಳಿಸಿ ಅಲ್ಲಿಂದ ಹೊರಟು ಹೋದರು. ನಂತರ ನಾನು ಅರಳುಮಲ್ಲಿಗೆ ಬಸ್ ಸ್ಟ್ಯಾಂಡ್ ಗೆ ನಡೆದುಕೊಂಡು ಹೋಗಿ, ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ಒಂದು ಕೆ.ಎಸ್.ಆರ್.ಟಿ.ಸಿ ನಲ್ಲಿ ದೊಡ್ಡಬಳ್ಳಾಪುರ ಬಸ್ ಸ್ಟ್ಯಾಂಡ್ ಗೆ ಬಂದು, ಅಲ್ಲಿಂದ ಮನೆಗೆ ಹೋಗಿದ್ದೇನೆ ಯಶೋಧಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Ramesh Babu

Journalist

Recent Posts

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

7 hours ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

24 hours ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

1 day ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

1 day ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

2 days ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

2 days ago