ಒಬ್ಬೊಂಟಿಯಾಗಿ ಆಟೋ ಹತ್ತುವ ಮಹಿಳೆಯರೇ ಹುಷಾರ್….!

ಕಮನೆಗೆ ತೆರಳಲು ಆಟೋ ಹತ್ತಿದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಹಿಳೆಯ ಕೊರಳಲ್ಲಿದ್ದ ಚಿನ್ನದ ತಾಳಿ ಸಮೇತ ಇದ್ದ ಸುಮಾರು 33 ಗ್ರಾಂ ತೂಕದ ಮಾಂಗಲ್ಯ ಸರ, 4 ಗ್ರಾಂ ತೂಕದ ಚಿನ್ನದ ಕಿವಿ ಓಲೆಯನ್ನು ದೋಚಿದ್ದ ಖತರ್ನಾಕ್ ಜೋಡಿಯನ್ನು ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ ಪೆಕ್ಟರ್ ಅಮರೇಶ್‌ ಗೌಡ ನೇತೃತ್ವದ ಪೊಲೀಸರು ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತೂಬಗೆರೆ ಪೇಟೆಯ ಯಶೋಧಮ್ಮ ಎನ್ನುವವರು ಜ.11ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ಮಗಳ ಮನೆಗೆ ತೆರಳಿದ್ದು, ಮರಳಿ ಮನೆಗೆ ಬರಲು ಕೊಂಗಾಡಿಯಪ್ಪ ಬಳಿ ಬಂದ ಆಟೋವನ್ನು ಹತ್ತಿದ್ದಾರೆ.

ಈ ಆಟದಲ್ಲಿ ಚಾಲಕನೊಂದಿಗೆ ಓಂಶಕ್ತಿ ಮಾಲಾಧಾರಿ ಮಹಿಳೆಯಿದ್ದು, ಆಕೆಯನ್ನು ಆಲಹಳ್ಳಿ ಬಿಟ್ಟು ನಂತರ ಯಶೋಧಮ್ಮ ಅವರನ್ನು ಮನೆಗೆ ಬಿಡುವುದಾಗಿ ಚಾಲಕ ಕರೆದೊಯ್ದಿದ್ದಾನೆ.

ಬಳಿಕ ನಾಗಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಈ ಜೋಡಿ, ಯಶೋಧಮ್ಮರ 33ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 4 ಗ್ರಾಂ ತೂಕದ ಓಲೆಯನ್ನು ದೋಚಿದ್ದು, ನಂತರ ಆಲಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ತನಿಖೆ ನಡೆಸಿ, ಯಶೋಧಮ್ಮ ಅವರನ್ನು ದೋಚಿದ್ದ ಖತರ್ನಾಕ್ ಜೋಡಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

ಬಂಧಿತರನ್ನು ರಾಜಾನುಕುಂಟೆ ಸಮೀಪದ ಹನಿಯೂರ ನಿವಾಸಿ ಆಟೋ ಚಾಲಕ ರಘು ಮತ್ತು ಚೆಲ್ಲಹಳ್ಳಿ ಗ್ರಾಮದ ಶ್ವೇತಾ ಎಂದು ಗುರುತಿಸಲಾಗಿದೆ.

ಇವರಿಬ್ಬರು ಪ್ರೇಮಿಗಳಾಗಿದ್ದು, ಓಂಶಕ್ತಿ ಮಾಲೆ ಧರಿಸಿದ್ದ ಶ್ವೇತಾಳಿಗೆ ಪೂಜಾ ಸಾಮಗ್ರಿ ಕೊಡಿಸಲು ದೊಡ್ಡಬಳ್ಳಾಪುರಕ್ಕೆ ಬಂದು, ಮರಳಿ ತೆರಳುವ ವೇಳೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಬಂಧಿತರು ಮಾಂಗಲ್ಯ ಸರವನ್ನು ಹೆಸರಘಟ್ಟದ ಮಣಿಪುರಂನಲ್ಲಿ ಅಡವಿಟ್ಟಿದ್ದು, ಮರು ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ವಿವರ:

ದಿನಾಂಕ 11/01/2025 ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ನಾನು ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ನಮ್ಮ ಮಗಳ ಮನೆಗೆ ಹೋಗಿದ್ದು, ನಂತರ ತೂಬಗೆರೆಪೇಟೆಯಲ್ಲಿನ ನಮ್ಮ ಮನೆಗೆ ವಾಪಸ್ ಬರುವ ಸಲುವಾಗಿ ನೆಲಮಂಗಲ ರಸ್ತೆ, ಕೊಂಗಾಡಿಯಪ್ಪ ಹೈಸ್ಕೂಲ್ ಮುಂಭಾಗದಲ್ಲಿ ನಿಂತಿದ್ದಾಗ, ಇಸ್ಲಾಂಪುರ ಕಡೆಯಿಂದ ಕೆ.ಸಿ.ಪಿ ಸರ್ಕಲ್ ಕಡೆಗೆ ಹೋಗಲು ಒಂದು ಆಟೋ ರಿಕ್ಷಾ ಬಂದಿರುತ್ತದೆ, ನಾನು ಈ ಆಟೋ ರಿಕ್ಷಾದಲ್ಲಿ ಹತ್ತಿಕೊಂಡಿದ್ದು, ಈಗಾಗಲೇ ಆಟೋ ರಿಕ್ಷಾದಲ್ಲಿ ಬೇರೆ ಒಬ್ಬ ಮಹಿಳೆ ಇದ್ದು, ಓಂ ಶಕ್ತಿ ಮಾಲೆ ಹಾಕಿರುವಂತೆ ಕಂಡು ಬಂದರು. ನಾನು ಆಟೋ ರಿಕ್ಷಾದಲ್ಲಿ ಹತ್ತಿಕೊಂಡ ನಂತರ ಆ ಮಹಿಳೆ ಆಟೋ ರಿಕ್ಷಾ ಚಾಲಕನಿಗೆ ಭಜನೆಗೆ ಲೇಟ್ ಆಗುತ್ತದೆ ನಮ್ಮ ಮನೆಯವರು ಲೋಕೇಷನ್ ಕಳಿಸಿದಾರೆ ಬೇಗ ಹೋಗಿ ಎಂದು ಹೇಳಿ ಆಟೋ ರಿಕ್ಷಾ ಚಾಲಕನಿಗೆ ಆಟೋವನ್ನು ಬೇಗನೆ ಚಾಲನೆ ಮಾಡಿಕೊಂಡು ಹೋಗುವಂತೆ ಹೇಳಿದ್ದು, ಆಟೋ ರಿಕ್ಷಾ ಚಾಲಕ ಆಟೋವನ್ನು ಚಾಲನೆ ಮಾಡಿಕೊಂಡು ಕೆ.ಸಿ.ಪಿ.ಸರ್ಕಲ್ ಹತ್ತಿರ ಹೋಗಿದ್ದು, ಆಟೋ ರಿಕ್ಷಾವನ್ನು ತೇರಿನ ಬೀದಿ ಕಡೆಗೆ ತಿರುಗಿಸದೆ, ನನ್ನನ್ನು ಆಲಹಳ್ಳಿ, ಕಡೆಗೆ ಕರೆದುಕೊಂಡು ಹೋಗಿ, ಲೊಕೇಶನ್ ಸಿಗುತ್ತಿಲ್ಲ ಎಂದು ಹೇಳಿ ಅಲ್ಲಿಂದ ಅರಳುಮಲ್ಲಿಗೆ, ನಾಗಸಂದ್ರ ಕಡೆಗಳಲ್ಲಿ ಸುತ್ತಾಡಿಸಿ ನಂತರ ಚಿಕ್ಕತುಮಕೂರು ಕಡೆಗೆ ಕರೆದುಕೊಂಡು ಹೋಗಿ, ಚಿಕ್ಕತುಮಕೂರು ಗ್ರಾಮದ ಬಳಿ ಆಟೋ ರಿಕ್ಷಾ ಚಾಲಕ ಮತ್ತು ಆಟೋ ದಲ್ಲಿ ಇದ್ದ ಮಹಿಳೆ ಇಬ್ಬರೂ ಸೇರಿ ನನ್ನನ್ನು ಹೆದರಿಸಿ, ಮಹಿಳೆಯು ನನ್ನ ಕೊರಳಲ್ಲಿ ಇದ್ದ ಚಿನ್ನದ ತಾಳಿ ಸಮೇತ ಇದ್ದ ಸುಮಾರು 33 ಗ್ರಾಂ ತೂಕದ ಮಾಂಗಲ್ಯ ಸರ, 4 ಗ್ರಾಂ ತೂಕದ ಚಿನ್ನದ ಕಿವಿ ಓಲೆಯನ್ನು ನನ್ನಿಂದ ಬಲವಂತವಾಗಿ ಬಿಚ್ಚಿಕೊಂಡು, ನನ್ನನ್ನು ಕೂಗದಂತೆ ಹೆದರಿಸಿದರು.

ಅಲ್ಲಿಂದ ಮತ್ತೆ ನನ್ನನ್ನು ಆಟೋ ರಿಕ್ಷಾದಲ್ಲಿ ಅರಳುಮಲ್ಲಿಗೆ ಹತ್ತಿರ ಕರೆದುಕೊಂಡು ಬಂದು ಸಂಜೆ ಸುಮಾರು 7-30 ಗಂಟೆಯಲ್ಲಿ ನನ್ನನ್ನು ಅರಳುಮಲ್ಲಿಗೆ ಬಸ್ ಸ್ಟ್ಯಾಂಡ್ ಸಮೀಪದಲ್ಲಿ ಆಟೋ ರಿಕ್ಷಾದಿಂದ ಕೆಳಗೆ ಇಳಿಸಿ ಅಲ್ಲಿಂದ ಹೊರಟು ಹೋದರು. ನಂತರ ನಾನು ಅರಳುಮಲ್ಲಿಗೆ ಬಸ್ ಸ್ಟ್ಯಾಂಡ್ ಗೆ ನಡೆದುಕೊಂಡು ಹೋಗಿ, ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ಒಂದು ಕೆ.ಎಸ್.ಆರ್.ಟಿ.ಸಿ ನಲ್ಲಿ ದೊಡ್ಡಬಳ್ಳಾಪುರ ಬಸ್ ಸ್ಟ್ಯಾಂಡ್ ಗೆ ಬಂದು, ಅಲ್ಲಿಂದ ಮನೆಗೆ ಹೋಗಿದ್ದೇನೆ ಯಶೋಧಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Ramesh Babu

Journalist

Recent Posts

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

3 hours ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

24 hours ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

1 day ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

2 days ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

2 days ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

2 days ago