ಏಡ್ಸ್ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನಾಯಕತ್ವ, ಅಂತಾರಾಷ್ಟ್ರೀಯ ಸಹಕಾರ ಮತ್ತು ಮಾನವ ಹಕ್ಕುಗಳ ಆಧಾರಿತ ವಿಧಾನಗಳನ್ನು ಉತ್ತೇಜಿಸುವುದು ಎಂದು ಪ್ರಭಾರ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಕೃಷ್ಣ ಲಕ್ಕಾರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
2025ರ ವಿಶ್ವ ಏಡ್ಸ್ ದಿನಾಚರಣೆಯ ಮುಖ್ಯ ಘೋಷ ವಾಕ್ಯವೆಂದರೆ ಅಡೆತಡೆಗಳನ್ನು ನಿವಾರಿಸುವುದು ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು ಎಂದರು.
ಎ.ಆರ್.ಟಿ ಅಧಿಕಾರಿಗಳಾದ ಡಾ. ನಿರಂಜನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಏಡ್ಸ್ ಆರಂಭಿಕ ಹಂತದಲ್ಲಿ ಜ್ವರ, ಗಂಟಲು ನೋವು ಸ್ನಾಯು ನೋವು, ಊದಿಕೊಂಡ ದುಗ್ದ್ ರಸ, ಗ್ರಂಥಿಗಳು ಕಂಡು ಬರಬಹುದು, ಏಡ್ಸ್ ಪ್ರಾರಂಭದ ಹಂತದಲ್ಲಿ ತೂಕ ನಷ್ಟ ದೀರ್ಘಕಾಲದ ಅತಿಸಾರ, ತೀವ್ರ ಆಯಾಸ, ರಾತ್ರಿ ಬೆವರುವಿಕೆ ಮತ್ತು ಸಣ್ಣ ಸೋಂಕುಗಳು ಕೂಡ ಗಂಭೀರ ಆಗಬಹುದು ಎಂದರು.
ಡ್ಯಾಪ್ಕೋ ಮತ್ತು ಕ್ಷಯ ವಿಭಾಗದ ಡಾ. ನಾಗೇಶ್ ಎಸ್ ಮಾತನಾಡಿ, ಏಡ್ಸ್ ಕುರಿತಾಗಿ ಮೂಡನಂಬಿಕೆಗಳಿಂದ ದೂರ ಇರಬೇಕು, ಏಡ್ಸ್ ರೋಗವು ಕೀಟಗಳಿಂದ, ಸ್ಪರ್ಶದಿಂದ, ಗಾಳಿ, ನೀರು ಸಾಮಾಜಿಕ ಸಂಪರ್ಕದ ಮೂಲಕ ಹರಡುವುದಿಲ್ಲ, ಏಡ್ಸ್ ರೋಗವು ರಕ್ತ, ವೀರ್ಯ, ಯೋನಿ ಸ್ರಾವ ಮತ್ತು ತಾಯಿಯ ಹಾಲಿನ ಮೂಲಕ ಹರಡುತ್ತದೆ, ನಿಖರವಾದ ಮಾಹಿತಿಯನ್ನು ಪಡೆಯುವುದು ಮತ್ತು ಹರಡುವಿಕೆಯನ್ನು ತಡೆಯುವುದು ಏಡ್ಸ್ ದಿನದ ಮುಖ್ಯ ಉದ್ದೇಶ ಎಂದರು.
ಪ್ರಾಂಶುಪಾಲರಾದ ಡಾ. ಗೌರಪ್ಪ ಎಂ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ವಹಿಸಿದ್ದರು.
ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ. ಚೈತನ್ಯ ಇಂದ್ರಾಣಿ, ಡಾ. ಎಂ. ಚಿಕ್ಕಣ್ಣ, ಶ್ರೀಮತಿ ಜಮುನಾ ಎಲ್. ಕೆ, ಶ್ರೀಮತಿ ಸ್ವಪ್ನ ಎ, ಶ್ರೀ ಹರೀಶ್, ರವೀಶ್, ಬಾಬು ಎಸ್ ರವರನ್ನು
ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶಾರದಾ ನಾಗನಾಥ್, ಉಪ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ರಮೇಶ್, ಕಾಲೇಜಿನ ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಎಂ ಚಿಕ್ಕಣ್ಣ, ವಿಭಾಗದ ಮುಖ್ಯಸ್ಥರುಗಳಾದ ಸಿ.ಪಿ ಪ್ರಕಾಶ್, ಚೈತ್ರ, ಆರ್.ಆರ್.ಸಿ ಮತ್ತು ವೈ.ಆರ್.ಸಿ ಸಂಚಾಲಕರಾದ ಕೀರ್ತನ ಪ್ರಾಧ್ಯಾಪಕರಾದ ದಿವ್ಯ, ಲಕ್ಷ್ಮೀಶ, ಆದೇಶ್, ವರುಣ್, ಸಿಬ್ಬಂದಿಗಳಾದ ರಮೇಶ್, ರವಿ ಮತ್ತಿತರರು ಹಾಜರಿದ್ದರು.
ದೇವನಹಳ್ಳಿ: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ಸಂಸ್ಥೆಯ 6E-6423 ವಿಮಾನಕ್ಕೆ…
ಸೋನಂ ವಾಂಗ್ ಚುಕ್...... ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಿಂತ ಸೋನಂ ವಾಂಗ್ ಚುಕ್ ಅವರ ಜೀವ ಭಾರತೀಯರಿಗೆ…
ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.…
ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಪಾಲನಜೋಗಿಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಗ್ರಾಮ ಪ್ರವೇಶ…
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ–44ರ ದೇವನಹಳ್ಳಿ ಬೈಪಾಸ್ನ ಕೆಂಪೇಗೌಡ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ಸರಕು ಸಾಗಣೆ…
ಸೆಲೆಬ್ರಿಟಿ................ ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ,…