ಬೆಂಗಳೂರಿನ ಕಸವನ್ನು ವಿಲೇವಾರಿ ಮಾಡಲು ಮಹದೇವಪುರ ಮತ್ತು ಮೀಟಗಾನಹಳ್ಳಿಯ ವಿಲೇವಾರಿ ಘಟಕಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಅಲ್ಲಿನ ಕಸದ ಲಾರಿಗಳು ದೊಡ್ಡಬಳ್ಳಾಪುರದ ಎಂಎಸ್ ಜಿಪಿ ಘಟಕದತ್ತ ಮುಖಮಾಡಿದ್ದವು. ವಿಷಯ ತಿಳಿದ ಇಲ್ಲಿನ ಸುತ್ತಮುತ್ತಲಿಮ ಗ್ರಾಮಸ್ಥರು ಹೆಚ್ಚುವರಿಯಾಗಿ ಬಂದ ಲಾರಿಗಳನ್ನು ತಡೆದು ವಾಪಸ್ ಕಳಿಸಿದ್ದರು. ಗ್ರಾಮಸ್ಥರಿಗೆ ಶಾಸಕ ಧೀರಜ್ ಮುನಿರಾಜು ಕೂಡ ಸಾಥ್ ನೀಡಿ ಕಸದ ಲಾರಿಗಳನ್ನು ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿದ್ದರು.
ಬುಧವಾರ ಕೂಡ ನಿಗದಿತ 70 ಲಾರಿಗಳು ಬಿಟ್ಟು ಹೆಚ್ಚುವರಿ ಲಾರಿಗಳು ಬರುವ ಆತಂಕದಿಂದ ಇಲ್ಲಿನ ಗ್ರಾಮಸ್ಥರು ಎಂಎಸ್ಜಿಪಿ ಘಟಕದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಇಡೀ ದಿನ ಗ್ರಾಮಸ್ಥರು ಬಂದು ಹೋಗುವ ಲಾರಿಗಳ ಮೇಲೆ ನಿಗಾವಹಿಸಿದ್ದರು.
ಸ್ಥಳಕ್ಕೆ ಡಿವೈಎಸ್ಪಿ ಬೇಟಿ ಪರಿಶೀಲನೆ:
ಎಂಎಸ್ ಜಿಪಿ ಘಟಕದ ಬಳಿಯ ಚಿಕ್ಕಮಂಕಳಾಲದ ಬಳಿ ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಯಿತು. ಎಂಎಸ್ಜಿಪಿ ಘಟಕದ ಲಾರಿಗಳ ದಾಖಲಾತಿಗಳನ್ನ ಪರಿಶೀಲಿಸಿ ಒಳಗೆ ಬಿಡಲಾಯಿತು. ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ದೊಡ್ಡಬೆಳವಂಗಲ ಹೋಬಳಿ ಇನ್ಸ್ಪೆಕ್ಟರ್ ಕಲ್ಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಎಂಎಸ್ಜಿಪಿ ಘಟಕದ ಎಂ.ಡಿ ಪ್ರವೀಣ್ ಗೌಡ ಜೊತೆ ಡಿವೈಎಸ್ಪಿ ಪಾಂಡುರಂಗ ದೂರವಾಣಿ ಕರೆ ಮಾಡಿ ಲಾರಿಗಳ ಸಂಖ್ಯೆ, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಹೆಚ್ಚುವರಿ ಲಾರಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಎಎಸ್ಐ ನೇತೃತ್ವದಲ್ಲಿ ಬಿಗಿ ಭದ್ರತೆಗೆ ಸೂಚಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶಾಸಕ ಧೀರಜ್ ತಿರುಗೇಟು:
ಅನುದಾನ ನೀಡಿಲ್ಲವೆಂದು ಹೇಳಿ ಕಸದ ಲಾರಿಗಳಿಗೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಶಾಸಕ ಧೀರಜ್ ಮುನಿರಾಜು ಸವಾಲು ಹಾಕಿದ್ದಾರೆ. ದೊಡ್ಡಬಳ್ಳಾಪುರಕ್ಕೆ ಕಸದ ಘಟಕದ ಪರಿಣಾಮವಾಗಿ 10 ಕೋಟಿ ಕಸದ ಅನುದಾನವನ್ನ ಮೀಸಲಿರಿಸಿದ್ದಾರೆ. ಆದರೆ ನಾನು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದಂತೆ ಅನುದಾನಕ್ಕೆ ಬೇಡಿಕೆ ಇಟ್ಟಿಲ್ಲ. ಕೇಳಿಲ್ಲ.. ಮುಂದೆಯೂ ಕೇಳಲ್ಲ.. ಇದರ ಬಗ್ಗೆ ನನ್ನ ಮನವಿ ಪತ್ರವಾಗಲಿ, ದೂರವಾಣಿ ಕರೆ ದಾಖಲೆಗಳಾಗಲಿ ಇದ್ದರೆ ಬಿಡುಗಡೆ ಮಾಡಲಿ ನಾನು ಸಿದ್ಧ, ಒಟ್ಟಾರೆ ನನಗೆ ಆ ಅನುದಾನವೂ ಬೇಡ. ಕಸದ ಘಟಕವೂ ಬೇಡ ಎಂದಿದ್ದಾರೆ.
ಎಸ್ಮಾ ಕಾಯ್ದೆ ಜಾರಿ ಮಾಡಿದರೂ ನಾನು ಸಿದ್ಧ:
ನಿನ್ನೆ ಅಂದಾಜು ಮಹದೇವಪುರ, ಬ್ಯಾಟರಾಯನಪುರದ ೪೦೦ ಕಸದ ಲಾರಿಗಳನ್ನು ವಾಪಸ್ ಕಳಿಸಿದ್ದೇನೆ. ತಾಲ್ಲೂಕಿಗೆ ಕಸವೂ ಬೇಡ.. ಕಸದ ಅನುದಾನವೂ ಬೇಡ.. ಜನರ ಪರ ನಿಂತು ಹೋರಾಟ ಮಾಡುತ್ತೇನೆ. ನೀವು ಎಸ್ಮಾ ಕಾಯ್ದೆ ಜಾರಿ ಮಾಡಿದರೂ ನಾನು ಸಿದ್ದ. ಏನೇ ಬೆದರಿಕೆ ಹಾಕಿದರೂ ಸಿದ್ದ, ನನ್ನ ಮನೆ ಮೇಲೆ ಕಸ ಸುರಿದರೂ ನಾನು ಸಿದ್ಧನಿದ್ದೇನೆ. ಜನರ ಪರವಾಗಿ ಯಾವುದೇ ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ಕಸದ ಘಟಕದಿಂದಾಗಿ ಈ ಭಾಗದ ಎರಡು ಗ್ರಾಮ ಪಂಚಾಯ್ತಿಗಳ ಪ್ರದೇಶದಲ್ಲಿ ನೆಲ, ಜಲ, ವಾಯು ಸಂಪೂರ್ಣ ಕಲುಷಿತಗೊಂಡಿದೆ. ಈ ಭಾಗದ ಜನರು ಅನೇಕ ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಜಾನುವಾರು ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆಲ್ಲ ಯಾರು ಹೊಣೆ. ಜನರು ಘಟಕವನ್ನು ಸ್ಥಗಿತಗೊಳಿಸಲು ಅಧಿಕಾರ ನೀಡಿದ್ದಾರೆ. ಜನರ ಪರವಾಗಿ ನಿಲ್ಲುತ್ತೇನೆ. ಕಸವನ್ನು ಸುರಿಯುವುದಿದ್ದರೆ ಆರ್. ಆಶೋಕ್, ಬಿ.ವೈ ವಿಜಯೇಂದ್ರ, ಬಿಜೆಪಿ ಕಚೇರಿ ಮುಂದೆ ಏಕೆ ನನ್ನ ಮನೆ ಮುಂದೆಯೇ ಸುರಿಯಲಿ. ಯಾವುದೇ ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ ಹೋರಾಟಕ್ಕೆ ಸಿದ್ದ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದ್ದಾರೆ.
ಖಾಯಂ ನೇಮಕಾತಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪರವಾನಗಿ…
2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ…
ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಕರಡಿ ಹಾವಳಿ ಮುಂದುವರಿದಿದೆ.. ರಾತ್ರೋರಾತ್ರಿ ರೈತರ ಹೊಲಗಳಿಗೆ ನುಗ್ಗಿ ಬಾಳೆ, ಹಲಸಿನ…
ಹಾಡಹಗಲೇ ಮನೆ ಬೀಗ ಮುರಿದು ಲಕ್ಷ ಲಕ್ಷ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ಏ.20ರಂದು ದೊಡ್ಡಬಳ್ಳಾಪುರ…
ಇಂದು ಬೆಳ್ಳಬೆಳಗ್ಗೆ ಸರಗಳನ್ನ ಕೈಚಳಕ ಕಂಡುಬಂದಿದೆ. ಬೆಳಗ್ಗೆ ಸುಮಾರು 5:30ರ ಸಮಯದಲ್ಲಿ ಮಹಿಳೆ ವಾಕಿಂಗ್ ಮಾಡುವ ವೇಳೆ ಕಳ್ಳನೋರ್ವ ಏಕಾಏಕಿ…