ಇವು ಹೆದ್ದಾರಿಯಲ್ಲಿರೋ ದೃಷ್ಟಿ ಬೊಂಬೆಗಳೋ, ಬೆಳಕು ನೀಡುವ ದೀಪಗಳೋ:  ಕಾಟಾಚಾರಕ್ಕೆ ಹೆದ್ದಾರಿ ವಿಭಜಕದ ಮೇಲೆ ಬೀದಿ ದೀಪಗಳ ಅಳವಡಿಕೆ: ಟೋಲ್ ನವರೇ ಏಕಿಷ್ಟು ನಿರ್ಲಕ್ಷ್ಯ..?- ಸಾರ್ವಜನಿಕರ ಆಕ್ರೋಶ

ಯಲಹಂಕ-ಹಿಂದೂಪುರ ಟೋಲ್ ರಸ್ತೆಯಲ್ಲಿ ವಾಹನ ಸವಾರರಿಂದ ಟೋಲ್ ಸುಂಕ ವಸೂಲಿ ಮಾಡುವ ಟೋಲ್ ನವರು, ತೆಗೆದುಕೊಂಡ ಹಣಕ್ಕೆ ಸೇವೆ ಕೊಡಲಾಗುತ್ತಿದಿಯೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ, ಟೋಲ್ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ, ಸರ್ಕಲ್ ಗಳಲ್ಲಿ ಹೈಮಾಸ್ಟ್ ದೀಪಗಳಿಲ್ಲ, ರಸ್ತೆ ಬದಿಯಲ್ಲಿ ಚರಂಡಿ ಇಲ್ಲ, ಸ್ವಚ್ಛತೆಯೂ ಇಲ್ಲ, ಸೂಚನ ಫಲಕಗಳಿಲ್ಲ, ಟ್ರಾಫಿಕ್ ಸಿಗ್ನಲ್ ಗಳಿಲ್ಲ. ಅವ್ಯವಸ್ಥಿತವಾಗಿರುವ ಟೋಲ್ ರಸ್ತೆಯಿಂದ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕೇವಲ ವಾಹನ ಸವಾರರಿಂದ ಹಣ ಸಂಗ್ರಹಿಸುವುದಷ್ಟೇ ನಮ್ಮ ಕಾಯಕ, ಸೇವೆ ನೀಡುವುದು ನಮ್ಮ ಧರ್ಮ ಅಲ್ಲ, ಅಮಾಯಕ ವಾಹನ ಸವಾರರು ಸತ್ತರೇನು ಎಂಬ ಉಢಾಪೆಯಲ್ಲಿದ್ದಾರೆ. ಅದಕ್ಕೆ ಸಾಕ್ಷಿ ಅನ್ನುವಂತೆ ಟೋಲ್ ರಸ್ತೆಯ ವ್ಯಾಪ್ತಿಯಲ್ಲಿ ಬರುವು ಟಿ.ಬಿ ಸರ್ಕಲ್ ನಿಂದ ಪಾಲನಜೋಗಹಳ್ಳಿಯವರೆಗೂ ಕಳೆದ 15 ದಿನಗಳಿಂದ ಬೀದಿ ದೀಪಗಳು ಉರಿಯುತ್ತಿಲ್ಲ.

ಯಲಹಂಕ-ಹಿಂದೂಪುರ ಟೋಲ್ ಸಂಸ್ಥೆ ಜನರ ರಕ್ತ ಹೀರುವ ಸಂಸ್ಥೆಯಾಗಿದೆ. ದೃಷ್ಟಿ ಬೊಂಬೆ ರೀತಿ ರಸ್ತೆಯ ವಿಭಜಕದ ಮೇಲೆ ಬೀದಿ ದೀಪಗಳನ್ನ ಹಾಕಲಾಗಿದೆ. ಕಳೆದ 15 ದಿನಗಳಿಂದ ಟಿ.ಬಿ ಸರ್ಕಲ್ ನಿಂದ ಪಾಲನಜೋಗಹಳ್ಳಿವರೆಗೂ ಒಂದೇ ಒಂದು ಲೈಟ್ ಉರಿಯುತ್ತಿಲ್ಲ. ಮುಂಜಾನೆ 4 ಗಂಟೆ ಸಮಯದಲ್ಲಿ ಎಪಿಎಂಸಿ ಗೆ ಸಾಕಷ್ಟು  ರೈತರು ಬರುತ್ತಾರೆ. ಕೆಲವು ರೈತರು ಸೈಕಲ್ ನಲ್ಲಿ ಬರುತ್ತಾರೆ, ಕತ್ತಲ ರಸ್ತೆಯಲ್ಲಿ ಬರುವುದರಿಂದ ಟೋಲ್ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದೆ ಎಂದು ಸ್ಥಳೀಯ ಮುಖಂಡರಾದ ಮಹಮ್ಮದ್ ಆದಿಲ್ ಪಾಷಾ ಕಿಡಿಕಾರಿದ್ದಾರೆ.

ರಸ್ತೆಯಲ್ಲಿ ಕಸವನ್ನು ತೆಗೆಯುವುದಿಲ್ಲ, ರಸ್ತೆಯಲ್ಲಿನ ಹಳ್ಳಗಳನ್ನ ದುರಸ್ಥಿ ಮಾಡದೆ ಆಗೆಯೇ ಬಿಟ್ಟಿದ್ದಾರೆ, ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಟೋಲ್ ನವರಿಗೆ ಮಾನವೀಯತೆಯೇ ಇಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದರು.

ಕಳೆದ 15 ದಿನಗಳ ಹಿಂದೆ ಯಲಹಂಕ-ಹಿಂದೂಪುರ ಟೋಲ್ ರಸ್ತೆಯ ಅವ್ಯವಸ್ಥೆ ಕಂಡು ಶಾಸಕ ಧೀರಜ್ ಮುನಿರಾಜು ಅವರು ಕೆಂಡಮಂಡಲರಾಗಿ ಟೋಲ್ ಮ್ಯಾನೇಜರ್ ಗೆ ಹಿಗ್ಗಾಮುಗ್ಗ ಜಾಡಿಸಿದರು. ಸಮಸ್ಯೆಗಳನ್ನ ಬಗೆಹರಿಸದಿದ್ದಲ್ಲಿ 15 ದಿನಕ್ಕೆ ಟೋಲ್ ನಿಲ್ಲಿಸ್ತಿನಿ, ನಿಂಗೆ 15 ದಿನ ಟೈಮ್ ಅಷ್ಟೆ, ನೀನು ಹೇಗೆ ಟೋಲ್ ಕಲೆಕ್ಟ್ ಮಾಡ್ತಿಯೋ ನೋಡ್ತಿನಿ ಎಂದು ಎಚ್ಚರಿಕೆಯನ್ನ ನೀಡಿದರು. ಆದರೆ, ವ್ಯವಸ್ಥೆಯ ವ್ಯಂಗ್ಯವೋ ಏನೋ, ಶಾಸಕರು ಎಚ್ಚರಿಕೆ ನೀಡಿದ ಕಳೆದ 15 ದಿನಗಳಿಂದ ಟೋಲ್ ರಸ್ತೆಯಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ, ಸ್ಥಳೀಯ ಶಾಸಕರಿಗೆ ಬೆಲೆ ಕೊಡದ ಟೋಲ್ ಸಂಸ್ಥೆಯವರು ಸಾರ್ವಜನಿಕರಿಗೆ ಬೆಲೆ ಕೊಡ್ತರಾ ಎನ್ನುವಂತಾಗಿದೆ.

Ramesh Babu

Journalist

Recent Posts

ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…

6 hours ago

ಕಡೇ ಕಾರ್ತೀಕ ಸೋಮವಾರ: ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…

8 hours ago

ನಾಳೆ (ನ.18) ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ….

ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್‌…

9 hours ago

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

15 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

16 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

19 hours ago