ಇವರೇ ನೋಡಿ ದೊಡ್ಡಬಳ್ಳಾಪುರದಲ್ಲೂ ಚಾಲಕರ ಮೇಲೆ ಹಲ್ಲೆ ಮಾಡಿದ ಪುಂಡರು

ಲಾಂಗ್ ಹಿಡಿದು ಪುಂಡರಿಂದ ಕಾರ್ ಗ್ಲಾಸ್ ಒಡೆದು ಪುಂಡಾಟ ಮೆರೆಯುತ್ತಿರುವ ಪುಂಡರು. ಹವಾ ಮೇಟೈಂನ್ ಮಾಡ್ಬೇಕು ಎಂಬ ಹುಚ್ಚಿನಿಂದ ಹುಚ್ಚಾಟ ಮೆರೆದಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಕಾರ್ ಗ್ಲಾಸ್ ಒಡೆದು ಸುಮ್ಮನಾಗದ ಈ ಗ್ಯಾಂಗ್.. ಮಾದನಾಯಕನಹಳ್ಳಿಯ ಮಾಗಡಿ ರೋಡ್ ಲಿಮಿಟ್ಸ್ ನಲ್ಲಿ ಕ್ಯಾಂಟರ್ ನಲ್ಲಿ ಮಲಗಿದ್ದ ಚಾಲಕನ ಮೇಲೆ ಲಾಂಗ್ ಬೀಸಿ ಪರಾರಿಯಾಗಿದ್ದಾರೆ.

ಮೊದಲಿಗೆ ಲಾರಿ ಗ್ಲಾಸ್ ಹೊಡೆದಿರೊ ಈ ಗ್ಯಾಂಗ್.. ಚಾಲಕ ಮಲಗಿರೋದನ್ನ ಗಮನಿಸಿ ಹಣಕ್ಕಾಗಿ ಬೆದರಿಸಿದ್ದಾರೆ..

ಹಣ ತೆಗೆದು ಕೊಡುವಷ್ಟರಲ್ಲಿ ಲಾಂಗ್ ಬೀಸಿ ಕೈ ಕಟ್ ಮಾಡಿದ್ದಾರೆ. ಬಳಿಕ ಮೊಬೈಲ್ ಹಾಗು 5 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ…

ಆ ಬಳಿಕ ದೊಡ್ಡಬಳ್ಳಾಪುರದ ಬಳಿ ಕೂಡ ಲಾಂಗ್ ಬೀಸಿರೊ ಪುಂಡರು … ಸಿಕ್ಕ ಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್ ನಿಂದ ಬೆದರಿಸಿ ಹಣ ದರೋಡೆ ಮಾಡಿದ್ದಾರೆ.

ಇದೀಗ ಆರೋಪಿಗಳಿಗಾಗಿ ಎಪಿನಗರ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಮತ್ತು ದೊಡ್ಡಬಳ್ಳಾಪುರ ಪೊಲೀಸ್ರಿಂದ ಹುಡುಕಾಟ ನಡೆಸಲಾಗುತ್ತಿದೆ.

ಬ್ಯಾಡರಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಕೇಸ್ ಗಳು ದಾಖಲಾಗಿದೆ. ಒಟ್ಟು ಹತ್ತಕ್ಕು ಹೆಚ್ಚು ಎಫ್ ಐ ಆರ್ ಗಳು ದಾಖಲಾಗಿವೆ.

Ramesh Babu

Journalist

Recent Posts

ಬೆಲೆ ಏರಿಕೆ, ನೀಟ್ ಅಕ್ರಮ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಪ್ರತಿಭಟನೆ

ದೊಡ್ಡಬಳ್ಳಾಪುರ: ಬೆಲೆ ಏರಿಕೆ ಹಾಗೂ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಿದರು. ನಗರದ…

39 minutes ago

ಮಂತ್ರಾಲಯದಿಂದ ಬರ್ತಿದ್ದ ಕಾರಿಂದ ಅಪಘಾತ: ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಸರಣಿ ಆಕ್ಸಿಡೆಂಟ್ .. ಬೈಕ್ ಸವಾರನಿಗೆ ಕಾಲು ಕಟ್.! ಸರಣಿ ಡಿಕ್ಕಿ ಸಿಸಿಟಿವಿಯಲ್ಲಿ ಸೆರೆ

ದೇವನಹಳ್ಳಿ: ಗುರು ರಾಯರ ದರ್ಶನ ಮುಗಿಸಿಕೊಂಡು ಬೆಂಗಳೂರಿನತ್ತ ಮರಳುತ್ತಿದ್ದ ಪ್ರಯಾಣಿಕರಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ಮತ್ತೊಂದು ಕಾರಿಗೆ…

1 hour ago

ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?…..

ಮಿತ್ರತ್ವ ಅಥವಾ ಸಹಜತೆಗೆ ದ್ರೋಹ....... ಒಂದು ಸಲಹೆ ಮತ್ತು ಮನವಿ..... ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ…

7 hours ago

ಲೀಸ್ ಜಮೀನು ವಿವಾದ: ಲೀಸ್ ಪಡೆದ ರೈತನ ಮೇಲೆ ಪಿಸ್ತೂಲ್‌ನಿಂದ ಹಲ್ಲೆ; ಗಾಳಿಯಲ್ಲಿ 7–8 ಸುತ್ತು ಗುಂಡು ಹಾರಿಸಿ ಬೆದರಿಕೆ ಆರೋಪ: ದೂರು ದಾಖಲು

ದೊಡ್ಡಬಳ್ಳಾಪುರ: ಲೀಸ್‌ಗೆ ಪಡೆದಿದ್ದ ಜಮೀನಿನ ವಿಚಾರವಾಗಿ ರೈತನೊಬ್ಬರ ಮೇಲೆ ಪಿಸ್ತೂಲ್‌ನಿಂದ ಹಲ್ಲೆ ನಡೆಸಿ, ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ…

1 day ago

ಬಸ್-ನೀರಿನ ಟ್ಯಾಂಕರ್ ಟ್ರ್ಯಾಕ್ಟರ್ ನಡುವೆ ಅಪಘಾತ: ಫುಲ್ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಹಳ್ಳಿ ಸಮೀಪ ಹಿಂದೂಪುರ–ಯಲಹಂಕ ರಾಜ್ಯ ಹೆದ್ದಾರಿಯಲ್ಲಿ ಬಸ್ ಹಾಗೂ ನೀರಿನ ಟ್ಯಾಂಕರ್ ಹೊತ್ತ ಟ್ರ್ಯಾಕ್ಟರ್ ನಡುವೆ ಸಂಭವಿಸಿದ…

2 days ago

ಶಾಸಕ ಪ್ರದೀಪ್ ಈಶ್ವರ್ ಕಾರಿಗೆ ಮುತ್ತಿಗೆ; ಚಪ್ಪಲಿ ಎಸೆತ, ಉದ್ವಿಗ್ನ ವಾತಾವರಣ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರು ಮುತ್ತಿಗೆ ಹಾಕಿದ ಘಟನೆ ಶನಿವಾರ…

2 days ago