ರಾತ್ರಿ ರಿಸೆಪ್ಷನ್ ಮುಗಿಸಿಕೊಂಡು ಬೆಳಗ್ಗೆ ತಾಳಿ ಕಟ್ಟುವ ವೇಳೆ ಮದುವೆ ಮುರಿದು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಾಲೆಪುರದ ಕಲ್ಯಾಣ ಮಂಟಪದಲ್ಲಿಂದು ನಡೆದಿದೆ..
ರಾತ್ರಿ ರಿಸೆಪ್ಷನ್ ಮಾಡಿಕೊಂಡ ವರ, ಬೆಳಗ್ಗೆ ತಾಳಿ ಕಟ್ಟುವ ವೇಳೆ ವಧುವಿನ ಮೇಲೆ ವರ ಅನುಮಾನಗೊಂಡು ತಾಳಿ ಕಟ್ಟದೇ ಮದುವೆ ಮಂಟಪದಿಂದ ಹಾರ ತೆಗೆದು ಬಿಸಾಕಿ ಹೋಗಿದ್ದಾನೆ.
ಯುವತಿ ಮೇಲೆ ಅನುಮಾನವಿದೆ ಎಂದು ಹೇಳಿದ ಯುವಕ ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದಾನೆ ಎನ್ನಲಾಗಿದೆ.
ಈ ಹಿಂದೆ ಹುಡುಗಿ ಬೇರೆಯವನನ್ನ ಲವ್ ಮಾಡಿದ್ದಾಳೆ ಅಂತ ವರನ ಕಿರಿಕ್ ಮಾಡಿದ್ದಾನೆ. ಈ ಯುವತಿ ಮದುವೆಗೂ ಮುಂಚೆಯೆ ಯುವಕನ ಬಳಿ ಎಲ್ಲಾ ವಿಚಾರ ಹೇಳಿದ್ದಳು ಎನ್ನಲಾಗಿದೆ.
ಎಲ್ಲಾ ಆಗಿದ್ದು ಆಗಿದೆ ಎಂದೇಳಿ ಮದುವೆ ಒಪ್ಪಿಕೊಂಡು, ಮದುವೆ ಮಂಟಪಕ್ಕೂ ಬಂದು ನಿನ್ನೆ ರಾತ್ರಿ ನಗು ನಗುತ್ತಾ ಆರತಕ್ಷತೆ ಮಾಡಿಕೊಂಡಿಸಿಕೊಂಡ ವರ, ಬೆಳಗ್ಗೆ ತಾಳಿ ಕಟ್ಟುವ ಸಮಯಕ್ಕೆ ಮದುವೆ ಬೇಡ ಎಂದು ಹೇಳಿ ಹೈಡ್ರಾಮ ಮಾಡಿ ಮದುವೆ ನಿಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ…
ಇದೀಗ ವಧು ಮತ್ತು ವರನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಧುವಿಗೆ ನ್ಯಾಯ ಕೊಡಿಸಿ ಅಂತ ವಧು ಕುಟುಂಬಸ್ಥರ ಒತ್ತಾಯ ಮಾಡಿದ್ದಾರೆ.
ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…
ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…
ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…
ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…
ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…
ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…