ಇಂಟರ್ ನೆಟ್ ಕೇಬಲ್ ಕದ್ದೊಯ್ದ ಕಳ್ಳರು: ಕೇಬಲ್ ಇದ್ದ ಚೇಂಬರ್ ತೆರೆದು ಕೇಬಲ್ ಎಸ್ಕೇಪ್: ಇಂಟರ್ ನೆಟ್ ಸೇವೆ ಇಲ್ಲದೆ ಜನರ ಪರದಾಟ: ನಗರದ ಕರೇನಹಳ್ಳಿಯ ರಂಗನಾಥ ಬೇಕರಿ ಬಳಿ ಘಟನೆ

 

ಸಾರ್ವಜನಿಕರ ಸೇವೆಗೆ ಖಾಸಗಿ ಕಂಪನಿ ವತಿಯಿಂದ ಇಂಟರ್ನೆಟ್ ಸೇವೆ ನೀಡಲು ಡಿಜಿಟಲ್ ಫೈಬರ್ ಚೇಂಬರ್ ಅಳವಡಿಸಿದ್ದು, ಚೇಂಬರ್ ನಲ್ಲಿ ಇದ್ದ ಇಂಟರ್ ನೆಟ್ ಕೇಬಲ್ ನ್ನು ಕಳ್ಳತನ ಮಾಡಿರುವ ಕಳ್ಳರು.

ನಗರದ ಕರೇನಹಳ್ಳಿ ರಂಗನಾಥ ಬೇಕರಿ ಬಳಿ ಘಟನೆ ನಡೆದಿದೆ. ಇಂಟರ್ ನೆಟ್ ಕೇಬಲ್ ಕಟ್ ಆಗಿದ್ದರಿಂದ ಸಾರ್ವಜನಿಕರು ಉಪಯೋಗಿಸುವ ಇಂಟರ್ ನೆಟ್ ಸೇವೆಯಲ್ಲಿ ಅಡಚಣೆ ಉಂಟಾಗಿದ್ದು, ಇದರಿಂದ ಸಾರ್ವಜನಿಕ ಮತ್ತು ಸೇವೆ ಒದಗಿಸುವ ಕಂಪನಿಗೆ ಸುಮಾರು 50 ಸಾವಿರ ನಷ್ಟವಾಗಿದೆ.

ಕಂಪನಿಗೆ ನಷ್ಟ ಉಂಟುಮಾಡಿರುವ ಆರೋಪಿಗಳ ವಿರುದ್ಧ ಇಂಡಿಯನ್ ಟೆಲಿಗ್ರಾಫ್ ಕಾಯ್ದೆ ಮತ್ತು ಕರ್ನಾಟಕ ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ 1984 ಹಾಗೂ ಇತರೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗರದುಕೊಳ್ಳುವಂತೆ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಕಂಪನಿ. ಈ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *