ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಹೆಣ್ಣು ಮಕ್ಕಳ ದಬ್ಬಾಳಿಕೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಇದೀಗ ಹಳೇ ದ್ವೇಷಕ್ಕೆ ಯುವತಿಯೊಬ್ಬಳು ತನ್ನ ಮಾವನನ್ನು ಕೊಲೆ ಮಾಡಲು ಗೂಂಡಾಗಳ ಗುಂಪು ಕಟ್ಟಿಕೊಂಡು ಪ್ರಯತ್ನ ಮಾಡಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಮೂವರು ಪಾರಾಗಿದ್ದಾರೆ ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್… ಇಲ್ಲಿದೆ ಓದಿ….
ಹೌದು…ಲಾಂಗು ಮಚ್ಚು ಹಿಡಿದು ಮಧ್ಯರಾತ್ರಿ ಮನೆಗೆ ಗುಂಪು ಕಟ್ಟಿಕೊಂಡು ನುಗ್ಗುತ್ತಿರುವ ದೃಶ್ಯ ಕಂಡು ಬಂದಿದ್ದು ಬೆಂಗಳೂರು ನಗರದ ಕುರುಡುಸೊಣ್ಣೇನಹಳ್ಳಿಯಲ್ಲಿ. ಪ್ರಭು ಎಂಬುವವರ ಮನೆ ಮೇಲೆ ತನ್ನ ತಂಗಿ ಮಗಳು ಶೃತಿ ಎಂಬುವಳು ಕೊಲೆ ಮಾಡುವ ಉದ್ದೇಶದಿಂದ ಮಧ್ಯರಾತ್ರಿ ಮನೆ ನುಗ್ಗಿದ್ದಾಳೆ. ನಾಲ್ಕೈದು ಗೂಂಡಾಗಳ ಗುಂಪು ಕಟ್ಟಿಕೊಂಡು ಪ್ರಭುನನ್ನು ಕೊಲೆ ಮಾಡಲು ಯತ್ನಸಿದ್ದಾಳೆ. ಆದರೆ ಅದೃಷ್ಟವಶಾತ್ ಪ್ರಭು ಮತ್ತು ಅವರ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ ಏಕಾಏಕಿ ಮನೆಗೆ ನುಗ್ಗಿ ಶೃತಿ ಮತ್ತು ಗ್ಯಾಂಗ್ ಕಾಲಿಂಗ್ ಬೆಲ್ ಹೊಡೆದಿದ್ದಾರೆ. ಆಗ ಲಾಂಗು, ಮಚ್ಚು ಸೇರಿದಂತೆ ಇತರೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.
ಇನ್ನೂ ಪ್ರಭು ಮತ್ತು ಶೃತಿ ಸಂಬಂಧಿಕರಾಗಿದ್ದು, ಜಮೀನು ವಿವಾದಕ್ಕೆ ಈ ರೀತಿ ಗೂಂಡಾಗಳನ್ನು ಗುಂಪು ಕಟ್ಟಿಕೊಂಡು ಕೊಲೆ ಪ್ರಯತ್ನ ಮಾಡಿದ್ದಾಳೆ. ಇನ್ನೂ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭುವನ್ನು ಕೊಲೆ ಮಾಡಲು ಯತ್ನಿಸಿದಾಗ ಮನೆಯ ಕಿಟಕಿ, ಬಾಗಿಲನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಆವಲಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಒಟ್ಟಾರೆ ಮಾವನನ್ನೇ ಕೊಲೆ ಮಾಡಲು ಶೃತಿ ಗೂಂಡಾಗಳನ್ನು ಗ್ಯಾಂಗ್ ಕಟ್ಟಿಕೊಂಡು ಬಂದಿರುವುದು ದುರದೃಷ್ಟಕರ ಸಂಗತಿ. ಏನಾದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ರೀತಿ ಮಧ್ಯೆ ರಾತ್ರಿ ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ತೋರಿಸಲು ಬಂದವರನ್ನು ಪೊಲೀಸರು ಕೂಡಲೇ ಬಂಧಿಸಬೇಕಿದೆ.