ಆರ್ ಸಿ ಬಿಗೆ ನೂತನ ಸಾರಥಿ, ಕೊಹ್ಲಿ ಶಿಷ್ಯನಿಗೆ ಪಟ್ಟ!

ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಶುರುವಾಗಿದ್ದು ಕ್ರಿಕೆಟ್ ಪ್ರೇಮಿಗಳು ರಸದೌತಣ ಸವಿಯಲು ಸಿದ್ದರಾಗಿದ್ದಾರೆ, ಜೊತೆ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸೇನೆಗೆ ನೂತನ ಸಾರಥಿಯನ್ನು ನೇಮಿಸಿದೆ.

ಕಳೆದ ಬಾರಿ ಸೆಮಿಸ್ ಗೆ ತಲುಪಿದ್ದ ಆರ್ ಸಿ ಬಿ ಮೆಗಾ ಹಾರಾಜಿನ ನಂತರ ಹೊಸ ತಂಡವಾಗಿ ರೂಪುಗೊಂಡಿದ್ದು, ಹಲವು ಹೊಸ ಆಟಗಾರರಿಗೆ ತಂಡ ಮಣೆ ಹಾಕಿದ್ದೂ, ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಕಳೆದ ಬಾರಿ ತಂಡದ ನಾಯಕರಾಗಿದ್ದ ಫಾಫ್ ಡೂಪ್ಲೆಸಿಸ್, ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಷವೆಲ್ ನಂತಹ ಹಿರಿಯ ಆಟಗಾರರನ್ನು ಕೈಬಿಟ್ಟಿದ್ದು ಸ್ಫೋಟಕ ದಾಂಡಿಗರಾದ ಫಿಲ್ ಸಾಲ್ಟ್, ಟಿಮ್ ಡೇವಿಡ್, ಜಾಕೋಬ್ ಬೇತಲ್ ರಂತಹ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಹೊಸ ಹಾಗೂ ಹುರುಪಿನ ತಂಡವನ್ನು ಕಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಆಯ್ಕೆ ಕಂಗಟ್ಟಾಗಿತ್ತು, ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿ ಮುನ್ನಡೆಸಿದ್ದ ಕೋಟ್ಯಂತರ ಅಭಿಮಾನಿಗಳ ಬಳಗ ಹೊಂದಿರುವ ಆರ್ ಸಿ ಬಿಗೆ ನೂತನ ನಾಯಕರಾಗಿ ಸ್ಪೋಟಕ ಆಟಗಾರ ರಜತ್ ಪಾಟಿದರ್ ಆಯ್ಕೆಯಾಗಿದ್ದಾರೆ.

ಹಲವಾರು ನಿರೀಕ್ಷೆಯೊಂದಿಗೆ ತಂಡದ ಆಡಳಿತ ಮಂಡಳಿ ಹಾಗೂ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರು ಸೇರಿ ರಜತ್ ಪಾಟಿದರ್ ಅವರನ್ನು ಆಯ್ಕೆ ಮಾಡಿದ್ದು ತಂಡವನ್ನು ಸಮತೋಲನ ಹಾಗೂ ಸಮರ್ಥವಾಗಿ ಮುನ್ನಡೆಸಿ ತನ್ನ ಸಾಮರ್ಥ್ಯವನ್ನು ಅನಾವರಣ ಗೊಳಿಸಬೇಕಾಗಿದೆ.

Leave a Reply

Your email address will not be published. Required fields are marked *