ಅ.29ರಂದು ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಅಪೆರೆಲ್‌ಪಾರ್ಕ್ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಇರುವುದರಿಂದ ವಿದ್ಯುತ್ ಸರಬರಾಜು ಆಗುತ್ತಿರುವ ಕಾರಣ ಅ.29ರ ಭಾನುವಾರ ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆದ್ದರಿಂದ ಎಚ್‌ಟಿ ಮತ್ತು ಎಲ್‌ಟಿ ಗ್ರಾಹಕರು ಮತ್ತು ಸಾರ್ವಜನಿಕರು ವಿದ್ಯುತ್ ಅಡಚಣೆಗೆ ಸಂಬಂಧಿಸಿದಂತೆ ಸಹಕರಿಸಲು ವಿನಂತಿಸಲಾಗಿದೆ.

ವಿದ್ಯುತ್ ಕಡಿತದ ಪ್ರದೇಶಗಳು

ದೊಡ್ಡಬಳ್ಳಾಪುರ ತಾಲೂಕಿನ ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳು, ಬಾಶೆಟ್ಟಿಹಳ್ಳಿ, ದೊಡ್ಡತುಮಕೂರು, ಚಿಕ್ಕತುಮಕೂರು, ಬೈರಸಂದ್ರ, ಹೊಸಹುಡ್ಯ, ಎಸ್‌ಎಲ್‌ಆರ್‌ ಕಾರ್ಖಾನೆ, ಹಿಮತ್‌ಸಿಂಗ್‌ ಕಾರ್ಖಾನೆ, ಏಕಶಿಪಾರ, ಕಸುವನಹಳ್ಳಿ, ಬಿಸುವನಹಳ್ಳಿ,‌ ಅರಳು‌ಮಲ್ಲಿಗೆ, ಎಸ್.ಎಂ.ಗೊಲ್ಲಹಳ್ಳಿ, ಜಕ್ಕಸಂದ್ರ, ಆಲಹಳ್ಳಿ, ಜಿಂಕೆಬಚ್ಚಹಳ್ಳಿ, ಮಜರಹೊಸಹಳ್ಳಿ, ಭುವನೇಶ್ವರಿನಗರ, ಬಾಶೆಟ್ಟಿಹಳ್ಳಿ, ಶ್ರೀನಗರ, ದೊಡ್ಡಬಳ್ಳಾಪುರ ಟೌನ್, ಅಪೆರಲ್ ಪಾರ್ಕ್ ಕೈಗಾರಿಕಾ ಪ್ರದೇಶಗಳು, ಓಬದೇನಹಳ್ಳಿ 3 ನೇ ಕೈಗಾರಿಕಾ ಪ್ರದೇಶಗಳು, ಓಬದೇನಹಳ್ಳಿ, ಅರೇಹಳ್ಳಿಗುಡ್ಡದಹಳ್ಳಿ, ರೈಲ್ವೆ ನಿಲ್ದಾಣ, ಇಂಡೇನಾ ಇಂಡಿಯಾ ಫ್ಯಾಕ್ಟರಿ, ಎಲ್ & ಟಿ ಫ್ಯಾಕ್ಟರಿ, ಜೆ.ಕೆ.ಪೈಂಟ್ಸ್ ಕಾರ್ಖಾನೆ, ಮುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು.

Leave a Reply

Your email address will not be published. Required fields are marked *