ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೇಯಿಂಗ್ ಗೆಸ್ಟ್ (ಪಿ.ಜಿ)ಗಳು ತಲೆಯೆತ್ತುತ್ತಿವೆ. ಇವುಗಳಲ್ಲಿ ನಿಯಮಾನುಸಾರ ಯಾವುದೇ ಕಾನೂನು ಪಾಲನೆಯಾಗದೆ ಅನಧಿಕೃತ ಪಿ.ಜಿಗಳು ಇರುವ ಬಗ್ಗೆ ಮಾಹಿತಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಗಮನಕ್ಕೆ ಬಂದಿದೆ. ಆದ್ದರಿಂದ ಬಾಶೆಟ್ಟಿಹಳ್ಳಿ ಪಂ.ಪ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಪಿಜಿಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪರವಾನಗಿ (ಲೈಸೆನ್ಸ್) ಇಲ್ಲದ ಪಿಜಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು.
ಈ ವೇಳೆ ರಾಜ್ಯ ಪ್ರಧಾನಕಾರ್ಯದರ್ಶಿ ಆರ್.ರಮೇಶ್, ರಾಜ್ಯ ಖಜಾಂಚಿ, ಚೇತನ್ ಗೌಡ, ರಾಜ್ಯ ಸಂಚಾಲಕ ವಾಸು, ತಾಲ್ಲೂಕು ಯುವ ಘಟಕ ಅಧ್ಯಕ್ಷರು ತ.ನ ರಂಜಿತ್ ಗೌಡ, ತಾಲ್ಲೂಕು ಯುವಘಟಕ ಸಂಚಾಲಕರಾದ ಬಸವರಾಜು, ಯುವಘಟಕದ ಮುಖಂಡ ಚಂದನ್ ಸೇರಿದಂತೆ ಇತರರು ಹಾಜರಿದ್ದರು.