ಅಧಿಕಾರ ದುರ್ಬಳಕೆ ಮತ್ತು ಕರ್ತವ್ಯ ಲೋಪ: ಗ್ರಾ.ಪಂ ಪಿಡಿಒ ಅಮಾನತು

ದೇವನಹಳ್ಳಿಯ ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಪಿಡಿಒ ಸಿ. ಮುನಿರಾಜು ಅವರು ಅಧಿಕಾರ ದುರ್ಬಳಕೆ ಮತ್ತು ಕರ್ತವ್ಯ ಲೋಪ ಹಿನ್ನೆಲೆ ಸಸ್ಪೆಂಡ್ ಆಗಿದ್ದಾರೆ.. ಸಿ. ಮುನಿರಾಜು ಅವರನ್ನು ಅಮಾನತು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಅನುರಾಧಾ ಆದೇಶ ಮಾಡಿದ್ದಾರೆ.

ಈ ಹಿಂದೆ ಸಮೇತನಹಳ್ಳಿ ಗ್ರಾ.ಪಂನಲ್ಲಿ ಪಿಡಿಒ ಆಗಿದ್ದ ಸಿ.ಮುನಿರಾಜು, ಬೇಜಾವಬ್ದಾರಿ, ಕರ್ತವ್ಯ ನಿರ್ಲಕ್ಷ್ಯ ಹಾಗೂ ಅಧಿಕಾರ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ..

ಸಮೇತನಹಳ್ಳಿ ಬಳಿ ರಾಫೆಲ್​ ರೆಸಿಡೆನ್ಸಿ ವಿಲ್ಲಾಗಳ ಇ-ಸ್ವತ್ತಿನಲ್ಲಿ ಅಕ್ರಮ ಬಯಲು ಹಾಗೂ ನೈಜತೆ ಇಲ್ಲದ ಛಾಯಾಚಿತ್ರಗಳನ್ನು ಅಪ್ಲೋಡ್​​ ಮಾಡಿದ್ದ ಆರೋಪದ ಮೇಲೆ ಪಿಡಿಒ ಸಿ. ಮುನಿರಾಜು ಅಮಾನತುಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!