Categories: ಲೇಖನ

ಅಧಿಕಾರದಲ್ಲಿ ಇರುವವರ ಆಲೋಚನೆ ಬೇರೆ.., ಕೆಲಸವಿಲ್ಲದ ನಮ್ಮಂತವರ ಯೋಚನೆಗಳೇ ಬೇರೆ…!

ನಾವು ಮತ್ತು ಅವರು…….

ಅಧಿಕಾರದಲ್ಲಿ ಇರುವವರ ಆಲೋಚನೆಗಳೇ ಬೇರೆ,
ಕೆಲಸವಿಲ್ಲದ ನಮ್ಮಂತವರ ಯೋಚನೆಗಳೇ ಬೇರೆ……..

ಪ್ರಾಮಾಣಿಕವಾಗಿರಬೇಕು, ಮೌಲ್ಯಯುತವಾಗಿರಬೇಕು,
ನಿಸ್ವಾರ್ಥಿಯಾಗಿರಬೇಕು ಎಂದು ಯೋಚಿಸುತ್ತಾ ಸಮಯ ಕಳೆಯುವ ನಾವು……..

ಅಧಿಕಾರದಲ್ಲಿರಬೇಕು,
ಹಣ ಮಾಡಬೇಕು,
ಜನಪ್ರಿಯತೆ ಗಳಿಸಬೇಕು,
ಅದನ್ನು ಉಳಿಸಿಕೊಳ್ಳಬೇಕು,
ಎಂದು ಯೋಚಿಸುತ್ತಾ ಸಮಯ ಉಪಯೋಗಿಸಿಕೊಳ್ಳುವ ಅವರು…..

ಸತ್ಯ ಅಹಿಂಸೆ ಸರಳತೆ ನಶ್ವರತೆ ತ್ಯಾಗ ಬಲಿದಾನಗಳ ಬಗ್ಗೆ ಮಾತನಾಡುವ ನಾವು………..,

ಸ್ಪರ್ಧೆ ಸೇಡು ಹಿಂಸೆ ಗೆಲುವು ಆಡಂಬರ ನಿರ್ವಹಣೆ ಯಶಸ್ಸುಗಳ ಬಗ್ಗೆಯೇ ಸದಾ ಯೋಚಿಸುವ ಅವರು……..

ರಕ್ತ ಸಂಬಂಧಿಗಳೊಂದಿಗೆ, ಸಂಸಾರದೊಂದಿಗೆ, ಗೆಳೆಯರೊಂದಿಗೆ, ಅಪರಿಚಿತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದೆ ಸದಾ ಅಸಹನೆಯೊಂದಿಗೆ ಇರುವ ನಾವು………,

ಪ್ರಗತಿಪರರು ಸಂಪ್ರದಾಯವಾದಿಗಳು ಎಲ್ಲಾ ಪಕ್ಷದವರು ಭ್ರಷ್ಟರು ಸಜ್ಜನರು ಕೊಲೆಗಡುಕರು ವಂಚಕರು ಸ್ವಾಮಿಗಳು ಪತ್ರಕರ್ತರು ಎಲ್ಲರೊಂದಿಗೂ ಸಮಚಿತ್ತದಿಂದ ವ್ಯವಹಾರ ನಡೆಸುವ ಅವರು………

ಸಾವು ಸೋಲಿನ ಭಯದಲ್ಲಿ ಸದಾ ಬದುಕಿನ ನಿರರ್ಥಕತೆ ಬಗ್ಗೆ ಮಾತನಾಡುತ್ತಾ ಇರುವುದನ್ನು ಕಳೆದು ಕೊಳ್ಳುತ್ತಿರುವ ನಾವು……….

ಸಾಯುವುದೇ ಇಲ್ಲವೆಂಬಂತೆ ಎಲ್ಲವನ್ನೂ ಇನ್ನಷ್ಟು ಮತ್ತಷ್ಟು ಪಡೆಯುತ್ತಾ ಹಲವಾರು ಪೀಳಿಗೆಗೆ ಆಗುವಷ್ಟು ಸಂಪಾದಿಸುತ್ತಿರುವ ಅವರು……

ಹೊಸ ಕಾರು ಹೊಸ ಮನೆ ಹೊಸ ಸೂಟು ಹೊಸ ಹುದ್ದೆ ಹೊಸ ಪ್ರಶಸ್ತಿ ಹೊಸ ತೋಟ ಎಲ್ಲವನ್ನೂ ಖರೀದಿಸುತ್ತಾ ಸಮಾಜದಲ್ಲಿಯೂ ಕುಟುಂಬದಲ್ಲಿಯೂ ಗೆಳೆಯರಲ್ಲಿಯೂ ಗೌರವ ಪಡೆಯುತ್ತಾ ಮೇಲೆ ಮೇಲೆ ಏರುತ್ತಿರುವ ಅವರು…..

ಇರುವ ವಸ್ತುಗಳನ್ನು, ಸಂಬಂಧಗಳನ್ನು, ಮೌಲ್ಯಗಳನ್ನು, ಗೌರವವನ್ನು ಉಳಿಸಿಕೊಳ್ಳಲಾಗದೆ ಅಬ್ಬೇಪಾರಿಯಂತೆ ಅಪಮೌಲ್ಯಗೊಂಡು ಅಲೆಮಾರಿಯಾಗಿರುವ ನಾವು……

ಸಮಾಜವನ್ನು ಸ್ವೀಕರಿಸುತ್ತಾ, ಬುದ್ಧಿಯನ್ನು ಅಡವಿಡುತ್ತಾ, ಯೋಚನೆಯನ್ನು ಬದಲಿಸಿಕೊಳ್ಳುತ್ತಾ, ಜೀತವನ್ನು ಆಸ್ವಾದಿಸುತ್ತಾ,
ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾ,
ಜೀವನೋತ್ಸಾಹ ಹೆಚ್ಚಿಸಿಕೊಳ್ಳತ್ತಾ ಬದುಕುತ್ತಿರುವ ಅವರು…..

ಸಮಾಜದೊಂದಿಗೆ ಸದಾ ಸಂಘರ್ಷಿಸುತ್ತಾ, ಜನರೊಂದಿಗೆ ಅಸಹನೆ ವ್ಯಕ್ತಪಡಿಸುತ್ತಾ, ಅವಕಾಶಗಳನ್ನು ನಿರಾಕರಿಸುತ್ತಾ, ಸ್ವತಂತ್ರವಾಗಿ ಚಿಂತಿಸುತ್ರಾ, ಬದುಕನ್ನೇ ಪ್ರಯೋಗಶಾಲೆ ಮಾಡಿಕೊಂಡು ಜೀವನದ ಭಾರದಲ್ಲಿ ಕುಸಿಯುತ್ತಿರುವ ನಾವು……

ಒಳ್ಳೆಯದರ ಬಗ್ಗೆ ಯೋಚಿಸುತ್ತಾ ಕೆಟ್ಟವರಾಗುತ್ತಿರುವ ನಾವು…..

ಕೆಟ್ಟದಾಗಿ ನಡೆದುಕೊಳ್ಳುತ್ತಾ ಸುಖ ಅನುಭವಿಸುತ್ತಿರುವ ಅವರು…..

ಪ್ರಕೃತಿ ದತ್ತ ಸಹಜ ಜೀವನ ಶೈಲಿಯನ್ನು ಅನುಸರಿಸಿ ಇದನ್ನು ಉಳಿಸಲು ಶ್ರಮ ಪಡುತ್ತಿರುವ ನಾವು……….

ಕೃತಕ ಜೀವನ ಶೈಲಿಯಿಂದ ಎಲ್ಲವನ್ನೂ ರಾಸಾಯನಿಕ ಗೊಳಿಸಿ ಪ್ರಕೃತಿಯನ್ನೇ ನಾಶ ಮಾಡುತ್ತಾ ಅಭಿವೃದ್ಧಿ ಸಾಧಿಸುತ್ತಿದ್ದೇವೆ ಎಂದು ಭಾವಿಸುವ ಅವರು………….

ಯಾವುದು ಸರಿ ಯಾವುದು ತಪ್ಪು ಯಾವುದನ್ನು ಮಾಡಬಾರದು ಯಾವುದನ್ನು ಮಾಡಬೇಕು ಎಂಬ ಗೊಂದಲದಲ್ಲಿ ನಾವು…….

ನಾವು ಮಾಡುತ್ತಿರುವುದೆಲ್ಲಾ ಸರಿ ನಾವೇ ಸರಿ ಎಂಬ ಆತ್ಮವಿಶ್ವಾಸದಲ್ಲಿ ಅವರು………

ದೇವರು ಧರ್ಮದ ವಾಸ್ತವಿಕ ಅಸ್ತಿತ್ವ ಮತ್ತು ಪ್ರಯೋಜನಗಳ ಬಗ್ಗೆ ಸತ್ಯದ ಹುಡುಕಾಟ ಮಾಡುತ್ತಾ ತಲೆಕೆಡಿಸಿಕೊಳ್ಳುವ ನಾವು……

ಯಾವುದನ್ನೂ ಯೋಚಿಸದೆ ಹಿಂದಿನ ಸಂಪ್ರದಾಯಗಳನ್ನೇ ಮುಂದುವರಿಸಿ ಬದುಕಿನ ಸವಿಯನ್ನು ಉಣ್ಣುವ ಅವರು………..

ಆದರೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ,
ನೀರಿನ ವಿರುದ್ಧ ದಿಕ್ಕಿನಲ್ಲಿ,
ಸಮಾಜ ವಿರುದ್ಧ ಚಿಂತನೆಗಳಲ್ಲಿ,
ನಮ್ಮ ಅರಿವಿನ ಒಳ್ಳೆಯದನ್ನೇ ಮಾಡುತ್ತಾ, ಹೊಸ ಹಾದಿಯಲ್ಲಿ ಹೆಜ್ಜೆಗಳನ್ನು ಇಡುತ್ತಾ ಮುನ್ನಡೆಯುವ ಸವಾಲು ಒಂದು ಒಂದು ರೀತಿಯ ಮಜಾ ಎಂದು ಭಾವಿಸಬಹುದೇ……

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…

5 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

8 hours ago

Affordable Emotional Support Animal Letters for Enhanced Well-being

Cheap Emotional Support Animal Letter: Affordable ESA Documentation Affordable Emotional Support Animal Letters for Enhanced…

16 hours ago

ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಶ್ರೀರಾಮೋತ್ಸವ‌:‌ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ: ಶ್ರೀರಾಮ ನಾಮದಲ್ಲಿ ಮಿಂದೆದ್ದ ಸಹಸ್ರಾರು ಜನ

ಶ್ರೀರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಾರ್ಚ್ 27 ರಿಂದ ಮೂರು ದಿನಗಳ…

20 hours ago

ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ದಾರುಣ ಸಾವು

ಆಟವಾಡುತ್ತಾ ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು…

23 hours ago

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್…!!?: ಪ್ರಸಾದ ತಿಂದ ಬಹುತೇಕ ಜನ ಆಸ್ಪತ್ರೆ ಪಾಲು….!

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್...!!?ಆಗಿದ್ದು, ಅನ್ನಪ್ರಸಾದ ಸೇವಿಸಿದ ಗ್ರಾಮಸ್ಥರಲ್ಲಿ ಬಹುತೇಕ ಜನ ಆಸ್ಪತ್ರೆ ಪಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ…

1 day ago