ಅದ್ಧೂರಿಯಾಗಿ ನಡೆದ ಅಕ್ಕಮಹಾದೇವಿ ಜಯಂತಿ ಆಚರಣೆ

ಅಕ್ಕಮಹಾದೇವಿ ಜಯಂತಿ ಹಿನ್ನೆಲೆ ನಗರದ ದೇಶದಪೇಟೆ ವೀರಶೈವ ಮಹಿಳಾ ಮಂಡಳಿ ಅಕ್ಕನ ಬಳಗ ವತಿಯಿಂದ ಅಕ್ಕಮಹಾದೇವಿ ಜಯಂತಿಯನ್ನು ಬಸವಣ್ಣನ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದ ಅಕ್ಕಮಹಾದೇವಿ ಅನುಯಾಯಿಗಳು.

ಈ ವೇಳೆ ಮಾತನಾಡಿದ ಮುಖಂಡರು, ಅಕ್ಕಮಹಾದೇವಿ ವಚನಗಳು ಸರ್ವಕಾಲಿಕ ಸತ್ಯ. ಅಕ್ಕನ ವಚನಗಳನ್ನು ವಿಶ್ಲೇಷಿಸುತ್ತಾ ಹೋದಂತೆಲ್ಲಾ ನಮ್ಮ ಲೌಕಿಕ ಜೀವನ ಹಸನಾಗುವುದು. ಇಂದಿಗೂ ಸ್ತ್ರೀ ಕುಲಕ್ಕೆ ಮಾದರಿಯಾಗುವಂತಹ ವ್ಯಕ್ತಿತ್ವ ಹೊಂದಿದ ಆದ್ಯ ವಚನಗಾರ್ತಿ ಅಕ್ಕಮಹಾದೇವಿ ಎಂದರು.

Leave a Reply

Your email address will not be published. Required fields are marked *