ಅಕ್ರಮ ಗೋಮಾಂಸ ಸಾಗಾಟ ಕೇಸ್: 7ಮಂದಿ ಗೋಮಾಂಸ ಸಾಗಾಟಗಾರರ ಬಂಧನ ಹಾಗೂ ಪ್ರಕರಣ ದಾಖಲು: ನೈತಿಕ ಪೊಲೀಸ್ ಗಿರಿ-ಹಲ್ಲೆ ಆರೋಪ: 16ಮಂದಿ ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಪ್ರಕರಣ

ಸೆ.24ರ ಬೆಳಗ್ಗೆ 5:45ರ ಸಮಯದಲ್ಲಿ ದೊಡ್ಡಬಳ್ಳಾಪುರ ನಗರದ ಐಬಿ ವೃತದ ಬಳಿ ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರು ನಗರಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಣಿಕೆ ಮಾಡುವ ವಾಹನಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ತಡೆದು ನಿಲ್ಲಿಸಿ ಅಕ್ರಮ ಗೊಮಾಂಸ ಸಾಗಾಣಿಕೆ ಬಗ್ಗೆ ನೀಡಿದ ದೂರಿನ ಮೇರೆಗೆ ಸಾಗಣೆ ಮಾಡಿದ 7 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಅದೇರೀತಿ ನೈತಿಕ ಪೊಲೀಸ್ ಗಿರಿ, ಆರೋಪಿಗಳ ಮೇಲೆ ಹಲ್ಲೆ, ಕಾರಿಗೆ ಬೆಂಕಿ ಹಚ್ಚಿ ವಾತಾವರಣ ಉದ್ವಿಗ್ನ ಪರಿಸ್ಥಿತಿಗೆ ತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೂ ಸಹ ಪ್ರಕರಣವನ್ನು ದಾಖಲಿಸಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ತಿಳಿದುಬಂದಿದೆ.

Leave a Reply

Your email address will not be published. Required fields are marked *