
ತನ್ನ ಪಾಡಿಗೆ ತಾನು ಟೀ ಅಂಗಡಿ ಬಳಿಯ ಕಲ್ಲಿನ ಮೇಲೆ ಕುಳಿತ್ತಿದ್ದ ವೃದ್ಧ ಮೇಲೆ ಬೊಲೆರೋ ಗೂಡ್ಸ್ ವಾಹನ ಹರಿದ ಪರಿಣಾಮ ವೃದ್ಧನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ…
ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಬಳಿ ಇಂದು ಮಧ್ಯಾಹ್ನ ಸುಮಾರು 12 ಗಂಟೆಯಲ್ಲಿ ನಡೆದಿದೆ…
ನರಸಹನುಮಯ್ಯ(70) ಗಾಯಾಳು.
ಸಕ್ಕರೆಗೊಲ್ಲಹಳ್ಳಿ ಬಳಿ ಕಡಿದಾದ ತಿರುವು ಇದ್ದು, ವೇಗವಾಗಿ ಬಂದ ಬೊಲೆರೋ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಬಳಿ ಕುಳಿತಿದ್ದ ವೃದ್ಧನ ಮೇಲೆ ಹರಿದಿದೆ. ಇದರಿಂದ ವೃದ್ಧನಿಗೆ ಕಾಲಿಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ….
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.